ಉಡುಪಿ, ಆಗಸ್ಟ್ 22 : ಉಡುಪಿ ಜಿಲ್ಲೆಯವರು, ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಖ್ಯಾತ ಸಾಹಿತಿಗಳಾದ ಡಾ ಯು ಆರ್ ಅನಂತಮೂತಿ೯ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ನೇರ ನಡೆನುಡಿಯಿಂದ, ಸಮಾಜವಾದಿ ಧೋರಣೆಯ ಮೂಲಕ, ನಿಭಿ೯ಡೆಯಿಂದ ತಮ್ಮ ಚಿಂತನಾ ಲಹರಿಯನ್ನು ಹರಿಬಿಡುವ ಮೂಲಕ ಅತೀವ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಅನಂತಮೂತಿ೯ಯಂತವರ ನಿಧನ ಸಾಹಿತ್ಯ ಲೋಕಕ್ಕೆ ಹಾಗೂ ಸಾಮಾಜಿಕ ವಲಯಕ್ಕೆ ತುಂಬಲಾರದ ನಷ್ಟ ಎಂದು ಸಚಿವರು ಹೇಳಿದ್ದಾರೆ.