ಮುಂಬಯಿ, ನ.30: ಶ್ರೀ ಅಂಬಿಕಾ ಪ್ರಿಂಟರ್ಸ್ ಎಂಡ್ ಪಬ್ಲಿಕೇಶನ್ಸ್ ಇದರ ಕರ್ನಾಟಕ ಮಲ್ಲ ಕನ್ನಡ ದೈನಿಕದಲ್ಲಿ ಸುಮಾರು ಎರಡುವರೆ ದಶಕಗಳಿಂದ ಸಹಾಯಕ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿ ಸದ್ಯ ಅನಾರೋಗ್ಯದಿಂದಾಗಿ ತಾಯ್ನಾಡಿನ ಉಡುಪಿ ಅಲ್ಲಿನ ವಳಕಾಡು ನಿವಾಸದಲ್ಲಿ ನೆಲೆಯಾಗಿದ್ದ ಅಶೋಕ್ ರಾವ್ (44.) ಇಂದಿಲ್ಲಿ ಸೋಮವಾರ ಮುಂಜಾನೆ ನಿಧನರಾದರು.
ಅಶೋಕ್ ರಾವ್ ಅವರು ಪತ್ನಿ, ಒಂದು ಹೆಣ್ಣು, ಸೆರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದು, ಅಶೋಕ್ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸಂತಾಪ ಸೂಚಿಸಿದ್ದು, ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ, ಗೌರವ ಕೋಶಾಧಿಕಾರಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು ಸೇರಿದಂತೆ ಸಂಘದ ಸರ್ವ ಪದಾಧಿಕಾರಿಗಳು, ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದಿಲ್ಲಿಸೋಮವಾರ ವಳಕಾಡುನ ರುಧ್ರಭೂಮಿಯಲ್ಲಿ ನೆರವೇರಿಸಲಾಗಿ ದ್ದು, ಪತ್ರಕರ್ತರ ಸಂಘವು ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ಸೂಚಿಸಿದೆ. ಅಂತೆಯೇ ಅಶೋಕ್ ಕುಟುಂಬಕ್ಕೆ ಸಾಂತ್ವನ ಸೂಚಿಸಿದ್ದು, ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಶ್ರೀದೇವರು ರಾವ್ ಪರಿವಾರಕ್ಕೆ ಕರುಣಿಸಲಿ ಎಂದು ಪ್ರಾಥಿರ್üಸಿದ್ದಾರೆ.