ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ಪರಿಸರದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಬಜ್ಪೆ ಪರಿಸರ ನಿವಾಸಿಗಳಾದ ಆಫ್ರೀದ್(19ವ) ಶಾಕಿಬ್ ಹುಸೈನ್ (19ವ) ನೌಫಾಲ್ ಆಕಿಬ್ (19ವ) ಮಹಮ್ಮದ್ ರಶೀದ್ (19ವ) ಎಂಬ ನಾಲ್ವರನ್ನು ಬಂಧಿಸಲಾಗಿದೆ.
ಇನ್ನೂ ಕೆಲವರನ್ನು ಶೀಘ್ರದಲ್ಲಿ ಬಂಧಿಸುವ ನಿರೀಕ್ಷೆ ಇದೆ.ಸುರತ್ಕಲ್ ಠಾಣಾ ವ್ಯಾಪ್ತಿಯ ಕಾನದಲ್ಲಿರುವ ಥಾಮಸ್ ಎಂಬವರ ಅಧೀನದಲ್ಲಿರುವ ಬಾಡಿಗೆ ಮನೆಯಿಂದ ನ.೧೧ರಂದು ಒಂದು ಲಕ್ಷದ ಮೂವತ್ತೈದು ಸಾವಿರ ರೂಪಾಯಿ ನಗದು, 4 ಮೊಬೈಲ್ ಹಾಗೂ ಕೈಗಡಿಯಾರಗಳನ್ನು ದರೋಡೆ ಮಾಡಲಾಗಿತ್ತು.ಮಾತ್ರವಲ್ಲದೆ, ನ.೨೨ ರಂದು ಕಾನದಲ್ಲಿ ೫೬ ಸಾವಿರ ನಗದು ಹಾಗೂ 7 ಮೊಬೈಲ್ ಗಳನ್ನು ದರೋಡೆ ಹಾಗೂ ಹಫ್ತಾ ವಸೂಲಿ ಬೆದರಿಕೆ ಪ್ರಕರಣಗಳು ಕೂಡ ಇವರ ಮೇಲೆ ದಾಖಲಾಗಿದೆ ಎಂದು ಮಂಗಳೂರು ಮಂಗಳೂರು ಕಮಿಷನರ್ ಮುರುಗನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.