ಸ್ವಾಮಿ ವಿವೇಕಾನಂದರ 153 ನೇ ಜನ್ಮ ದಿನಾಚರಣೆ ಜನವರಿ 12, 2016 ರಂದು ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಜೈನ ಹೈಸ್ಕೂಲಿನ ವಿದ್ಯಾರ್ಥಿಗಳಿಗೆವಿವೇಕಾನಂದರ ಜೀವನದ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಉಡುಪಿ ಯುಕೊ ಬ್ಯಾಂಕಿನ ಉದ್ಯೋಗಿ, ಮೂಡುಬಿದಿರೆ ಜೈನ ಪೇಟೆಯ ವಿವೇಕಾನಂದ ಕೇಂದ್ರದ ಶ್ರೀಮತಿ ಪ್ರೇಮಕಲಾ ದಯಾನಂದ ಮಲ್ಯ ರವರು ವಿವೇಕಾನಂದರ ಜೀವನ ವೃತ್ತಾಂತಗಳನ್ನು ಬಹಳ ಸರಳ ಮಾತು, ಸುವಿಚಾರೀ ಹೃದ್ಯ-ಗಾಯನಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕ ರಾಯೀ ರಾಜ ಕುಮಾರರು ಉಪಸ್ಥಿತರಿದ್ದರು. ಶಾಲಾ ನಾಯಕಿ ತಸ್ಲೀಮಾ ಬಾನು ಸ್ವಾಗತಿಸಿ ವಂದಿಸಿದರು.