ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಡಿಸಿಪಿ ಸಂಜೀವ್ ಅವರು ಶುಕ್ರವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿ ಅಕ್ರಮಗಳನ್ನು ಪತ್ತೆ ಹಚ್ಚಿ ಜೈಲು ಅಧಿಕಾರಿಗಳಿಗೆ ಮತ್ತು ಸಿಬಂದಿಗಳಿಗೆ ಶಾಕ್ ನೀಡಿದ್ದಾರೆ.
ಕ್ರೈಂ ವಿಭಾಗದ ಡಿಸಿಪಿ ಸಂಜೀವ್ ಅವರ ನೇತ್ರತ್ವದಲ್ಲಿ ಬರ್ಕೆ ಪೊಲೀಸ್ ತಂಡ ದಾಳಿ ನಡೆಸಿ ನಡೆಸಿ ಕೈದಿಗಳು ಅಕ್ರಮವಾಗಿ ಬಳಸುತ್ತಿದ್ದ 15 ಮೊಬೈಲ್ಗಳು , ಚಾರ್ಜರ್, 5 ಪ್ಯಾಕೇಟ್ ಗಾಂಜಾವನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ಜೈಲಿನಲ್ಲಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ತಿಳಿದು ಬಂದ ಕಾರಣ ಆಯುಕ್ತರು ದಿಢೀರ್ ದಾಳಿ ನಡೆಸಲು ಸೂಚನೆ ನೀಡಿದ್ದರು. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಗಳ ಕಾವಲಿನ ನಡುವೆಯೂ ಗಾಂಜಾ,ಮೊಬೈಲ್ಗಳು ಜೈಲು ಪ್ರವೇಶಿಸಿರುವುದು ಆತಂಕಕ್ಕೆ ಕಾರಣವಾಗಿದೆ.