ಉಡುಪಿ: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ , ಭಾರತೀಯ ವೈದ್ಯ ಪದ್ದತಿಗಳ ಮಹತ್ವದ ಬಗ್ಗೆ ರಾಜ್ಯಾದ್ಯಂತ ಕುರಿತು ಅರಿವು ಮೂಡಿಸುವ ಧನ್ವಂತರಿ ಆಯುರ್ ಜ್ಯೋತಿ ರಥಯಾತ್ರೆ ಇಂದು ಉಡುಪಿಗೆ ಆಗಮಿಸಿತು.
ಅಂಬಾಗಿಲಿನಲ್ಲಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು. ಸಮಾರಂಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಲಕಾನಂದ, ಉದ್ಯಾವರದ ಧರ್ಮಸ್ಥಳ ಆರ್ಯುವೇದ ಆಸ್ಪತ್ರೆಯ ಪ್ರಾಂಶುಪಾಲ ಡಾ. ಸತ್ಯ ನಾರಾಯಣ ಭಟ್ , ಜಿಲ್ಲಾ ಆಯುಷ್ ಸಂಸ್ಥೆಗಳ ಅಧ್ಯಕ್ಷ ಅಂಚನ್ , ಡಾ. ತನ್ಮಯ್ ಗೋಸ್ವಾಮಿ , ಮತ್ತಿತರರು ಉಪಸ್ಥಿತರಿದ್ದರು.
ರಥಯಾತ್ರೆಯೊಂದಿಗೆ ಅಯುಷ್ ಪದ್ದತಿಯ ವೈದ್ಯರು ಮತ್ತುವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.