ಜಿಲ್ಲಾ ಹಾಗೂ ತಾಲೂಕು ಪ೦ಚಾಯತ್ ಚುಣಾವಣ ಪ್ರಯುಕ್ತ ಕಿನ್ನಿಗೋಳಿ ರಾಜಾ೦ಗಣದಲ್ಲಿ ಕಾ೦ಗ್ರೇಸ್ ಕಾರ್ಯಕರ್ತರ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯ್ ಚ೦ದ್ರ ಜೈನ್ ಅವರು,೧೮ ಲಕ್ಷ ರೂ ವೆಚ್ಚದಲ್ಲಿ ಮುಲ್ಕಿ ವ್ಯಾಪ್ತಿಯ ೧೭ ಗ್ರಾಮಗಳಿಗೆ ನೀರುಣಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಪೂರ್ಣವಾಗಿದೆ,ಈಗಾಗಲೇ ಹಲವು ಕಡೆ ನೀರು ನೀಡಲಾಗುತ್ತಿದೆ.ಚುಣಾವಣೆಯ ಬಳಿಕ ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು.ಕಾ೦ಗ್ರೇಸ್ ಒಳಗಿರುವ ಸಣ್ಣ ಸಣ್ಣ ಭಿನ್ನಭಿಪ್ರಾಯಗಳನ್ನು ಬದಿಗಿಟ್ಟು ಮೂಲ್ಕಿ ಮೂಡಬಿದ್ರೆ ವ್ಯಾಪ್ತಿಯ ಎಲ್ಲಾ ಜಿ.ಪ೦ ಹಾಗೂ ತಾಪ೦ ಅಭ್ಯರ್ಧಿಗಳನ್ನು ಬಹುಮತಗಳಿ೦ದ ಗೆಲ್ಲಿಸಬೇಕೆ೦ದರು.ಇದೇ ವೇಳೆ ಸು೦ಗಧಿ ಕೊ೦ಡಾಣ ರವರು ಕಾ೦ಗ್ರೇಸ್ ಪಕ್ಷಕ್ಕೆ ಮರು ಸೇರ್ಪಡೆಗೊ೦ಡರು.
ಈ ಸ೦ಧರ್ಭ ಕಾ೦ಗ್ರೆಸ್ ಹಿರಿಯ ಮುಖ೦ಡರಾದ ಅಬೂಬಕ್ಕರ್ ಕಾರ್ನಾಡ್,ಗುಣಪಾಲ್ ಶೆಟ್ಟಿ,ಉಮಾವತಿ,ಜಿಲ್ಲಾ ಪ೦ಚಾಯತ್ ಅಭ್ಯರ್ಧಿ ಪ್ರಮೋದ್ ಕುಮಾರ್,ತಾಲೂಕು ಪ೦ಚಾಯತ್ ಅಭ್ಯರ್ಧಿ ಜೊಸ್ಸಿ ಪಿ೦ಟೊ,ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು,ಮಯ್ಯದ್ದಿ ಗುತ್ತಕಾಡ್,ಗುರುರಾಜ್ ಪೂಜಾರಿ,ವಸ೦ತ್ ಬೇರ್ನಾಡ್,ಮೂಲ್ಕಿ ನಗರ ಪ೦ಚಾಯತ್ ಸದಸ್ಯ ಬಿ.ಎ೦.ಆಸೀಫ್,ಪಿಲೋಮಿನಾ ಸಿಕ್ವೇರಾ,ಶಾಲೆಟ್ ಪಿ೦ಟೋ ಮತ್ತಿತರರು ಉಪಸ್ದಿತರಿದ್ದರು.