ಮಂಗಳೂರು: ಮಂಗಳೂರಿನ ಪಾಂಡೇಶ್ವರದಲ್ಲಿ ಫೆ. 5 ರಂದು ರಾತ್ರಿ ಕೇರಳದ ಕಾಂಞಂಗಾಡ್ನ ಮಹಮದ್ ಫಾಝಿಲ್ (24) ಅವರ ಕೊಲೆಗೆ ಯತ್ನ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.ಅತ್ತಾವರ ಕಾಪ್ರಿಗುಡ್ಡೆಯ ಸಿ. ಅಬ್ದುಲ್ ಹಮೀದ್ (20), ಅತ್ತಾವರದ ಎಂ. ಇಸ್ಮಾಯಿಲ್ (20) ಮತ್ತು ಶಾಬಾನ್ ಮಿಶಬ್ (23), ಮುಳಿಹಿತ್ಲುವಿನ ಊವಿಸ್ ಅಹಮದ್ (20), ಕುದ್ರೋಳಿ ಬೊಕ್ಕಪಟ್ಣದ ನೌಫಾಲ್ (20) ಮತ್ತು ಕೇರಳದ ಕಾಂಞಂಗಾಡ್ನ ಸೊಹೈಲ್ ಎಂ.ಪಿ. (40) ಬಂಧಿತರು.ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಫೆ. 20 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆ ವಿವರ:
ಫೆ. 5 ರಂದು ರಾತ್ರಿ ಮಹಮದ್ ಫಾಝಿಲ್ ಅವರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪಾಂಡೇಶ್ವರದ ಫಿಝಾ ಮಾಲ್ ಎದುರು ಮುಖ್ಯ ರಸ್ತೆಯಲ್ಲಿ ಆರೋಪಿಗಳು ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಬಳಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಹಳೆ ದ್ವೇಷ ಈ ಘಟನೆಗೆ ಕಾರಣ ಎನ್ನಲಾಗಿದೆ.