ಮಂಗಳೂರು: ಜೇನುಗೂಡಿಗೆ ಹಕ್ಕಿಯೊಂದು ನುಗ್ಗಿದ ಪರಿಣಾಮ ಕೆರಳಿದ ಜೇನುನೊಣಗಳು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಹಿನ್ನೆಲೆ ವ್ಯಕ್ತಿ ಸಾವನ್ನಪ್ಪಿದ ಘಟನೆ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕಿಲ್ಲೂರಿನ ಪೂವಪ್ಪ(೬೦) ಎಂದು ಗುರುತಿಸಲಾಗಿದೆ.
ಜೇನುನೊಣಗಳು ಶಾಲಾ ಮಕ್ಕಳ ಮೇಲೂ ದಾಳಿ ನಡೆಸಿದ್ದು ಸುಮೀತ್(೧೩) ಗಂಭೀರ ಗಾಯಗೊಂಡಿದ್ದಾನೆ. ಸುಮೀತ್ ಗೆ ಬೆಳ್ತಂಗಡಿಯ ಬದ್ಯಾರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಘಟನೆ ಕುರಿತಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.