Wednesday 24th, April 2024
canara news

ಮುಂಬಯಿಯಲ್ಲಿನ ತುಳುಕನ್ನಡಿಗ ರಾಜಶೇಖರ್ ಆರ್.ಕೋಟ್ಯಾನ್

Published On : 14 Feb 2016   |  Reported By : Rons Bantwal


ಮುಡಿಗೇರಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕಾರ
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.13: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯ, ಮುಂಬಯಿಯಲ್ಲಿನ ತುಳು ಕನ್ನಡಿಗ ನಿರ್ಮಾಪಕ, ನಿರ್ದೇಶಕ, ನಟ ರಾಜಶೇಖರ್ ಆರ್.ಕೋಟ್ಯಾನ್ ತನ್ನ ನಿರ್ಮಾಪಕತ್ವ, ನಿರ್ದೇಶನದಲ್ಲಿ ನಿರ್ಮಿಸಿದ `ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ' ತುಳು ಚಲನಚಿತ್ರಕ್ಕೆ 2014ನೇ ಸಾಲಿನ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿ `ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ' ಪ್ರಶಸ್ತಿ ಪ್ರಾಪ್ತಿಯಾಗಿದೆ.

ಅತ್ತ್ಯುತ್ತಮ ಸಂಘಟನಾ ಚತುರ, ಪ್ರತಿಭಾನ್ವಿತ ಕಲಾಕಾರ ಎಂದೇ ಗುರುತಿಸಲ್ಪಟ್ಟ ರಾಜಶೇಖರ್ ಆರ್. ಕೋಟ್ಯಾನ್ ತಮ್ಮ ಓರ್ವ ನಿಷ್ಠಾವಂತ ಕಲಾಕಾರ, ಪ್ರಾಮಾಣಿಕತೆ ಮತ್ತು ಅವಿರತ ಶ್ರಮ ಇವರ ಸದ್ಗುಣತಾ ಸಂಪನ್ನಗಳು. ಮುಂಬಯಿ ಸೇರಿ ಓರ್ವ ಹೊಟೇಲು ಕಾರ್ಮಿಕನಾಗಿದ್ದು ಮೂವತ್ತು ರೂಪಾಯಿ ಸಂಬಳಕ್ಕೆ ದುಡಿತ್ತಾ ಅಪ್ರತಿಮ ಕಲಾಕಾರನಾಗಿ ದುಡಿಸಿಕೊಂಡ ರಾಜಶೇಖರ್ ಬ್ರಹ್ಮಶ್ರೀ ನಾರಾಯಣ ಗುರು, ಕೋಟಿ ಚೆನ್ನಯರ ಪ್ರಮ ಭಕ್ತರಾಗಿದ್ದು ಅವರ ಜೀವನಕ್ಕೆ ತನ್ನ ಬದುಕನ್ನು ಮುಡುಪಾಗಿಸಿಕೊಂಡವರಾಗಿದ್ದಾರೆ.

ಕನ್ನಡ, ತಮಿಳು, ತೆಲುಗು, ತುಳು ಹೀಗೇ ಬಹುಭಾಷಾ ಚಲನಚಿತ್ರಗಳಲ್ಲಿ ನಟಿಸಿ ಚಲನಚಿತ್ರರಂಗದಲ್ಲಿ ತನ್ನದೇ ಆದ ಪ್ರತಿಷ್ಠೆಯನ್ನು ಗಳಿಸಿಕೊಂಡ ರಾಜಶೇಖರ್ ಅವರು ಕನ್ನಡದ ಸ್ಟಾಂಟ್ ಮಾಸ್ಟರ್ ಚಿತ್ರದಲ್ಲಿ ಹಿರೋ ಪಾತ್ರ ಮಾಡಿದ್ದಾರೆ. ಈ ಚಿತ್ರದ ಹಿರೋಹಿನ್ ಆಗಿ ಸುಧಾರಾಣಿ ನಟಿಸಿದ್ದಾರೆ. ಅಂಥರ್‍ಗಾಮಿ, ಗಡಿಪಾರ್ ಚಿತ್ರಗಳಲ್ಲೂ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಜೀವನಧಾರೆ, ನಾ..ಮೆಚ್ಚಿದ ಹುಡುಗನಿಗೆ, ಇಂಡಿಯನ್ ಪೆÇಲೀಸ್ ಹಿಸ್ಟರಿ, ವ್ಹಿಲನ್, ಕಲಸೀ ಪಾಳ್ಯ, ಪಾದು, ಅಕ್ಕತಂಗಿ, ಮಂಡ್ಯ, ಐದ್ಯು, ಆಟೋ ಶಂಕರ್ ಸೇರಿದಂತೆ ಹತ್ತುಹಲವಾರು ಚಿತ್ರಗಳಲ್ಲಿ ನಟಿಸಿರುವರು.
ತುಳುವಿನ ಕೋಟಿ ಚೆನ್ನಯ ಚಿತ್ರದಲ್ಲಿ ಚೆನ್ನಯನ ಪಾತ್ರ, `ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ' ತುಳು ಚಲನಚಿತ್ರದಲ್ಲಿ ಸೂರಪ್ಪನ ಪಾತ್ರ ಅಂತೆಯೇ ದೇವುಪೂಂಜ ಚಿತ್ರದಲ್ಲಿ ದೇವುಪೂಂಜನ ಪಾತ್ರ ನಿಭಾಯಿಸಿ ಜನಮೆಚ್ಚಿದ ನಟನಾಗಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕು ಮುದರಂಗಡಿ ಅಲ್ಲಿನ ಸಾಂತೂರು ಗರಡಿ ಮನೆತನದ ರಾಘವೇಂದ್ರ ಕೋಟ್ಯಾನ್ ಮತ್ತು ಕಲ್ಯಾಣಿ ಆರ್.ಕೋಟ್ಯಾನ್ ದಂಪತಿಯ ಸುಪುತ್ರನಾಗಿರುವ ರಾಜಶೇಖರ್ ಓರ್ವ ಬಹುಮುಖ ಪ್ರತಿಭೆಯ ಚಿರಪರಿತ ಕಲಾವಿದ. ಸುಮಾರು 20 ವರ್ಷಗಳಲ್ಲಿ 35 ಚಲನಚಿತ್ರಗಳಲ್ಲಿ ನಟಿಸಿ ಪರಶುರಾಮನ ಸೃಷ್ಠಿಯ ಬಹುತೇಕರ ಮನೆಮನಗಳಲ್ಲಿ ಪರಿಚಿತ ಹೆಸರು ಇವರದ್ದಾಗಿದೆ.

ಪ್ರಸ್ತುತ ಧರ್ಮಪತ್ನಿ ಹರಿಣಾಕ್ಷಿ ಆರ್. ಕೋಟ್ಯಾನ್ ಹಾಗೂ ಏಕೈಕ ಸುಪುತ್ರ ರಂಜಿತ್ ಆರ್. ಕೋಟ್ಯಾನ್ ಅವರನ್ನೊಳಗೊಂಡು ಮುಂಬಯಿಯಲ್ಲಿ ನೆಲೆಯಾಗಿರುವ ರಾಜಶೇಖರ್ ಸದ್ಯ ದರ್ಶನ್ ಅವರ ನಾಯಕ ನಟನೆಯ ಜಗ್ಗುದಾದ, ವಿಜಯ್ ನಾಯಕ ನಟನೆಯ ಮುರ್ಗ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

`ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ' ತುಳು ಚಲನಚಿತ್ರದ ಮೂಲಕ ಇದೇ ಮೊತ್ತಮೊದಲಾಗಿ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದ ರಾಜಶೇಖರ್ ಆರ್.ಕೋಟ್ಯಾನ್ ಅವರಿಗೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ. ಸುವರ್ಣ, ಅಶೋಕ್ ಎಂ. ಕೋಟ್ಯಾನ್, ಆಡಳಿತ ನಿರ್ದೇಶಕ ಸಿ. ಆರ್ ಮೂಲ್ಕಿ, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಸಿಎ| ಅಶ್ವಜಿತ್ ಹೆಜ್ಮಾಡಿ, ನಿಲೇಶ್ ಬಿ.ಪೂಜಾರಿ ಪಲಿಮಾರು, ಉದ್ಯಮಿಗಳಾದ ಹರೀಶ್ ಜಿ.ಅಮೀನ್, ದಯಾನಂದ ಬೋಂಟ್ರಾ ಬರೋಡ, ಸುರೇಂದ್ರ ಎ.ಪೂಜಾರಿ, ತೋನ್ಸೆ ಸಂಜೀವ ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ ಸೇರಿದಂತೆ ಅನೇಕ ಗಣ್ಯರು ಸಂತಸ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here