ಮಂಗಳೂರು: ಯುವಕನೋರ್ವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೋರ್ವಳನ್ನು ಅಪಹರಣಗೈದಿರುವ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ನಡೆದಿದೆ. ವಿದ್ಯಾರ್ಥಿನಿಯನ್ನು ಅಪಹರಿಸಿದ ಯುವಕನನ್ನು ಕುಂಪಲ ಮೂರುಕಟ್ಟೆ ನಿವಾಸಿ ಶಶಿ(೨೧) ಎಂದು ಗುರುತಿಸಲಾಗಿದೆ.
ಈತ ಕುಂಪಲದಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ. ಫೆ.೨೦ರಂದು ಶಾಲೆಗೆಂದು ತೆರಳಿದ ವಿದ್ಯಾರ್ಥಿನಿ ಮರಳಿ ಮನೆಗೆ ಬಾರದಿರುವುದನ್ನು ಕಂಡ ಮನೆಮಂದಿ ಸ್ಥಳೀಯರಲ್ಲಿ ವಿಚಾರಿಸಿದಾಗ ನೆರೆಮನೆಯ ಯುವಕ ಕೂಡ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಆಧಾರದ ಮೇಲೆ ಶಶಿ ಎಂಬಾತನೆ ಬಾಲಕಿಯನ್ನು ಅಪಹರಿಸಿರಬಹುದೆಂದು ಬಾಲಕಿಯ ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.