ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಶೇಕಡಾ ೧೭.೫೪ರಷ್ಟು ಮತದಾನವಾಗಿದೆ. ಒಟ್ಟು ೩೩೨೬ ಮತದಾರರು ದ.ಕ.ಜಿಲ್ಲೆಯಲ್ಲಿ ನೊಂದಾಯಿತರಾಗಿದ್ದು, ಆ ಪೈಕಿ ೪೭೯ ಗಂಡಸರು ಮತ್ತು ೧೦೮ ಮಹಿಳೆಯರು ಸೇರಿ ಒಟ್ಟು ೫೮೭ ಮತದಾರರು ಮತಚಲಾಯಿಸಿದ್ದಾರೆ. ಒಟ್ಟು ೧೪ ಅಭ್ಯರ್ಥಿಗಳು ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಜಿಲ್ಲೆಯ ೮ ಮತಗಟ್ಟೆಗಳಲ್ಲಿ ಮತದಾನ ವ್ಯವಸ್ಥೆ ಮಾಡಲಾಗಿತ್ತು ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾಧಿಕಾರಿ, ಮಂಗಳೂರು ತಹಶೀಲ್ದಾರ್ ಶಿವಶಂಕರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.