ಸ್ವರ್ಗೀಯ ಪೊ೯. ನಳಿನಿ ವಿಶ್ವನಾಥ ಕಾರ್ನಾಡ್ ಸಾಹಿತ್ಯ ಪ್ರಶಸ್ತಿ ಪ್ರದಾನ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ,ಮಾರ್ಚ್.09: ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗವು ಇಂದಿಲ್ಲಿ ಮಂಗಳವಾರ ಸಂಜೆ ಸಂಘದ ಬಾರ್ಕೂರು ರುಕ್ಮಿಣಿ ಶೆಟ್ಟಿ ಕಿರು ಸಭಾಗೃಹದಲ್ಲಿ ವಿಶ್ವ ಮಹಿಳಾದಿನ ಸಂಭ್ರಮಿಸಿತು.
ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಲೇಖಕಿ ಅಪರ್ಣಾ ರಾವ್ ಅವರು ಸೃಜನಶೀಲತೆ ಮತ್ತು ಮಹಿಳೆ ವಿಷಯದಲ್ಲಿ ಉಪನ್ಯಾಸವನ್ನೀಡಿದರು. ¨ಳಿಕ ಸಂಘವು ವಾರ್ಷಿಕವಾಗಿ ಕೊಡಮಾಡುವ ಸ್ವರ್ಗೀಯ ಪೆÇ್ರ. ನಳಿನಿ ವಿಶ್ವನಾಥ ಕಾರ್ನಾಡ್ ಸ್ಮರಣಾರ್ಥ ಸಾಹಿತ್ಯ ಪ್ರಶಸ್ತಿಯನ್ನು ಅನುವಾದಕಿ, ಲೇಖಕಿ ಶ್ಯಾಮಲಾ ಮಾಧವ್ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷರುಗಳಾದ ಶಕುಂತಳಾ ಆರ್.ಪ್ರಭು, ಜಿ.ಟಿ ಆಚಾರ್ಯ, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಪಯ್ಯಾರು ರಮೇಶ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಇಂದಿರಾ ಮೊೈಲಿ ಮತ್ತು ಸುಗುಣಾ ಬಂಗೇರ ಅತಿಥಿsಗಳನ್ನು ಪರಿಚಯಿಸಿದರು. ಅಧ್ಯಕ್ಷರು ಅತಿಥಿsಗಳಿಗೆ ಸ್ಮರಣಿಕೆ, ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮಿತ್ರಾ ಕುಂದರ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸೀಮಾ ಕುಲ್ಕರ್ಣಿ ಕುಲ್ಕರ್ಣಿ, ವಸಂತಿ ಕೋಟೆಕಾರ್ ಪ್ರಾರ್ಥನೆಯನ್ನಾಡಿದರು. ಪದ್ಮಾವತಿ ಶೆಟ್ಟಿ ಪ್ರಶಸ್ತಿಪತ್ರ ವಾಚಿಸಿದರು. ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ದೇಶಪಾಂಡೆ ಅಭಾರ ಮನ್ನಿಸಿದರು.