ಮಂಗಳೂರು: ಕೇಂದ್ರ ಬಜೆಟ್ ನಲ್ಲಿರುವ ಚಿನ್ನದ ಆಭರಣಗಳಿಗೆ ಅಬಕಾರಿ ಸುಂಕ ಮತ್ತು ಸೇವಾ ಶುಲ್ಕವನ್ನು ವಿರೋಧಿಸಿ ಮಂಗಳೂರಿನಾದ್ಯಂತ ಸ್ವರ್ಣ ವ್ಯಾಪಾರಿ ಸಂಘದ ವತಿಯಿಂದ ಪ್ರತಿಭಟನಾ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಬಜೆಟ್ ನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಶೇ.೧ ಟಿ.ಸಿ.ಎಸ್ ಮತ್ತು ಶೇ. ೧ ಅಬಕಾರಿ ಶುಲ್ಕವನ್ನು ವಿಧಿಸಲಾಗಿದೆ. ಅಲ್ಲದೆ, ೨ ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆಭರಣ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯಗೊಳಿಸಿದೆ. ಇನ್ನು, ವಜ್ರಾಭರಣ ಖರೀದಿಗೆ ಕೂಡ ಅಬಕಾರಿ ಸುಂಕ ಹೇರಲಾಗಿದೆ. ಹೆಚ್ಚಿನ ವ್ಯಾಪಾರಸ್ಥರು ಅವಿದ್ಯಾವಂತರಾಗಿರುವುದರಿಂದ ಇದು ಅಸಾದ್ಯ ಎಂದು ಸ್ವರ್ಣ ವ್ಯಾಪರಿಗಳು ಹೇಳುತ್ತಿದ್ದಾರೆ.