ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಹಾಗೂ ಮಾನಹಾನಿ ಸಂದೇಶ ರವಾನಿಸುತ್ತಿದ್ದ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಈ ಮೂವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಹಾಗೂ ಮಾನಹಾನಿ ಸಂದೇಶ ರವಾನಿಸುತ್ತಿದ್ದ ಬಗ್ಗೆ ವಿಟ್ಲ ಠಾಣೆಯಲ್ಲು ದೂರು ದಾಖಲಾಗಿತ್ತು. ಬಂಧಿತರನ್ನು ಕೋಡಪದವು ಬೊಣ್ಯಕುಕ್ಕು ನಿವಾಸಿ ಮಹಮ್ಮದ್ ಅಲಿ(೨೪), ವಿಟ್ಲ ಪಡ್ನೂರು ಕುಕ್ಕಿಲ ನಿವಾಸಿ ನಿಸಾರ್ ಕುಕ್ಕಿಲ(೨೨), ಮರಕ್ಕಿಣಿ ನಿವಾಸಿ ಸಫ್ಪಾನ್ ಅಡ್ಯನಡ್ಕ(೨೧) ಬಂಧಿತ ಆರೋಪಿಗಳು.
ವಿಟ್ಲ ಪಡ್ನೂಊರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಬ್ದುಲ್ ಕುಕ್ಕಿಲ ಅವರ ಪುತ್ರ ಶಾಹುಲ್ ಹಮೀದ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.