ಬಂಟ್ವಾಳ: ಸೌತ್ ಕೆನರಾ ಪೋಟೋಗ್ರಾಫರ್ಸ್ ಎಸೋಸಿಯೇಶನ್ (ರಿ). ದ.ಕ.ಉಡುಪಿ ಜೆಲ್ಲೆಯ ಬಂಟ್ವಾಳ ವಲಯ ಮತ್ತು ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀ ಸೇವಾ ಟ್ರಸ್ಟ್(ರಿ)ನಿತ್ಯಾನಂದ ನಗರ ಬೈಪಾಸ್ ಬಂಟ್ವಾಳ ಇವರ ವತಿಯಿಂದ ಅಕ್ಯೂಪ್ರೆಶರ್ ಚಿಕಿತ್ಸಾ ಶಿಬಿರ ನಿತ್ಯಾನಂದ ನಗರದ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸೌತ್ ಕೆನರಾ ಪೋಟೋಗ್ರಾಫರ್ಸ್ ಎಸೋಸಿಯೇಶನ್ (ರಿ). ದ.ಕ.ಉಡುಪಿ ಜೆಲ್ಲೆಯ ಅಧ್ಯಕ್ಷ ಜಗನ್ನಾಥ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರಿಗೆ ಆರೋಗ್ಯ ಬಹುಮುಖ್ಯ ಅದನ್ನು ಗಣನೆಗೆ ತೆಗೆದುಕೊಂಡು ಈ ಕಾರ್ಯಕ್ರಮವನ್ನು ಎರಡು ಸಂಘಟನೆ ಕೈಗೊಂಡಿರುವುದು ಶ್ಲಾಘನೀಯ ಎಂದರು. ಮಾಜಿ ಪುರಸಭಾ ಅಧ್ಯಕ್ಷ , ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀ ಸೇವಾ ಟ್ರಸ್ಟ್ ನ ಅಧ್ಯಕ್ಷ ದಿನೇಶ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ| ಎಮ್ ಆರ್ ಜಾಕರ್, ಡಾ|ಬಾವೇಶ್ ಜೈನ್, ಡಾ|ಪ್ರಕಾಶ್ ಜಾಕರ್, ಡಾ|ಲಾಲ್ ಚಂದ್ , ಜಿಲ್ಲಾ ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲೆವಸ್, ವಲಯ ಅಧ್ಯಕ್ಷ ಸುಕುಮಾರ್, ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ, ಗೌರವಾಧ್ಯಕ್ಷ ಆನಂದ ಎನ್, ಪ್ರಧಾನ್ ಕಾರ್ಯದರ್ಶಿ ಹರೀಶ್ ಕುಂದರ್, ಕೋಶಾಧಿಕಾರಿ ರವಿ ಕಲ್ಪನೆ. ರಾಜೇಂದ್ರ ಕೆ. ಹರೀಶ್ ನಾಟಿ, ವಿಕೇಶ್, ರಾeರತ್ನ, ಯೋಗೀಶ್ ಕುಲಾಲ್, ಸುರೇಶ್ ಕುಲಾಲ್, ಹರೀಶ್ ಉಪಸಿತರಿದ್ದರು.