ಮಂಗಳೂರು:ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ ಕ್ರೈಸ್ತ ಬಾಂಧವರು ಮಂಗಳೂರಿನಲ್ಲಿ ಶುಭ ಶುಕ್ರವಾರವನ್ನು ಭಕ್ತಿ , ಶ್ರದ್ದೆಯಿಂದ ಆಚರಿಸಿದರು.ಮಂಗಳೂರಿನ ಎಲ್ಲಾ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಚರ್ಚ್ ಮತ್ತು ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತರ ಶಿಲುಬೆಯ ಮರಣ ಶಿಕ್ಷೆ ವಿಧಿಸಿದ್ದಲ್ಲಿಂದ ತೊಡಗಿ ಅವರು ಶಿಲುಬೆಯಲ್ಲಿ ಮರಣಿಸಿ ಸಮಾಧಿ ಮಾಡುವಲ್ಲಿನ ೧೪ ಪ್ರಮುಖ ಘಟನಾವಳಿಗೆ ಸಂಬಂಧಿಸಿ 'ಶಿಲುಬೆಯ ಹಾದಿ ' ಆಚರಿಸುವ ಮೂಲಕ ಯೇಸುಕ್ರಿಸ್ತರು ಅನುಭವಿಸಿದ ಕಷ್ಟ - ಸಂಕಷ್ಟಗಳ ಸ್ಮರಣೆ ಮಾಡಲಾಯಿತು.ಶುಭ ಶುಕ್ರವಾರ ದಂದು ಧ್ಯಾನ ಮತ್ತು ಉಪವಾಸ ಮೂಲಕ ಕ್ರೈಸ್ತ ಬಾಂಧವರು ಪ್ರಾರ್ಥನಾ ದಿನವಾಗಿ ಆಚರಿಸಿದರು.