ಮಂಗಳೂರು: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ಕೊಲ್ಯ ಬಳಿ ನಡೆದಿದೆ. ಮೃತರನ್ನು ಸಾರಸ್ವತ ಕಾಲನಿ ನಿವಾಸಿ ಅವಿಲ್ ರೋಷನ್ ಡಿಸೋಜಾ (35) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟು ಕಾಪಿಕಾಡಿನ ಗೇರುಕೃಷಿ ಅಭಿವೃದ್ಧಿ ಕೇಂದ್ರದ ಎದುರುಗಡೆಯ ರೈಲ್ವೇ ಹಳಿಯಲ್ಲಿ ಗುರುವಾರ ತಡರಾತ್ರಿ ವೇಳೆ ಈ ಅವಘಡ ಸಂಭವಿಸಿದೆ.
ಶುಕ್ರವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಅವಿಲ್ ತೊಕ್ಕೊಟ್ಟುವಿನಿಂದ ಸಾರಸ್ವತ ಕಾಲನಿ ಮನೆಗೆ ರೈಲ್ವೇ ಹಳಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರೈಲು ಢಿಕ್ಕಿ ಹೊಡೆದಿದೆ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.