ಮಂಗಳೂರು: ನಗರ ವಾಸಿಗಳಿಗೆ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳಲು ರಾಜ್ಯ ಸರಕಾರ ಅರಣ್ಯ ಇಲಾಖೆಯ ಮೂಲಕ ಅಭಿವೃದ್ಧಿ ಪಡಿಸಿದ ತಣ್ಣೀರುಬಾವಿಯ ಟ್ರೀ ಪಾರ್ಕ್ (ಸಸ್ಯೋದ್ಯಾನ) ಮಾ. 26ರಂದು ಲೋಕಾರ್ಪಣೆಗೊಳ್ಳಲಿದೆ.ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ.ಟಿ. ಹನುಮಂತಪ್ಪ ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.ಫಲ್ಗುಣಿ ನದಿ ಮತ್ತು ಅರಬಿ ಸಮುದ್ರದ ತಟದಲ್ಲಿ 15 ಹೆಕ್ಟೇರ್ ಪ್ರದೇಶದಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಇದರಲ್ಲಿ ನದಿ ತೀರದ 9 ಹೆಕ್ಟೇರ್ ಪ್ರದೇಶದಲ್ಲಿ ಹೊನ್ನೆ ಮರದ ನೆಡುತೋಪು ಇದೆ. ಉಳಿದ 6 ಹೆಕ್ಟೇರ್ನಲ್ಲಿ ಪಶ್ಚಿಮ ಘಟ್ಟದ 50ರಷ್ಟು ವಿವಿಧ ಜಾತಿಯ ಅಪೂರ್ವ ಗಿಡ, ಮರ, ಬಳ್ಳಿಗಳನ್ನು ನೆಡಲಾಗಿದೆ. 16 ಔಷಧೀಯ ಗಿಡಗಳ ಉದ್ಯಾನವೂ ಇದೆ. ಪಾರ್ಕ್ನ ಸುತ್ತಲೂ 31 ಲಕ್ಷ ರೂ. ವೆಚ್ಚದಲ್ಲಿ ಬೇಲಿಯನ್ನು ಹಾಕಿ ಭದ್ರ ಪಡಿಸಲಾಗಿದೆ ಎಂದರು.
ಮಾ. 26 ರಂದು ಬೆಳಗ್ಗೆ 11.30ಕ್ಕೆ ಟ್ರೀ ಪಾರ್ಕನ್ನು ಅರಣ್ಯ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು,.
ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸುವರು. ಸಚಿವರಾದ ಯು.ಟಿ. ಖಾದರ್, ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಇತರ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.