ಮಂಗಳೂರು: ದೇಶದ ಏಳಿಗೆಗಾಗಿ ಎಲ್ಲ ವಿದ್ಯಾರ್ಥಿಗಳು ಶ್ರಮಿಸ ಬೇಕು. ದೇಶಕ್ಕಾಗಿ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ರಾಜೀವ್ ಪ್ರತಾಪ್ ರೂಡಿ ಹೇಳಿದರು.ಮಂಗಳೂರಿನ ವಿಕಾಸ್ ಪ.ಪೂ. ಕಾಲೇಜಿನಲ್ಲಿ "ಸ್ಮರ್ಧಾತ್ಮಕ ಪರೀಕ್ಷೆಯ 60/60 ಸೂತ್ರ'ದ ಪುಸ್ತಕವನ್ನು ಅವರು ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಸಂದರ್ಭ ಮಾಜಿ ಉಸ್ತುವಾರಿ ಸಚಿವ ನಾಗರಾಜ ಶೆಟ್ಟಿ, ಸಂಸ್ಥೆ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್, ಟ್ರಸ್ಟಿಗಳಾದ ಜೆ. ಕೊರಗಪ್ಪ, ಸೂರಜ್ ಕಲ್ಯ, ಸಲಹೆಗಾರ ಡಾ| ಅನಂತ ಪ್ರಭು ಜಿ., ಉಪ ಪ್ರಾಂಶುಪಾಲ ಮೋಹನ ಉಪಸ್ಥಿತರಿದ್ದರು.