ಮಂಗಳೂರು: ನಕ್ಸಲ್ ವಿರುದ್ಧ ಕೂಂಬಿಂಗ್ ನಲ್ಲಿ ನಿರತವಾಗಿದ್ದ ಎಎನ್ಎಫ್ ಪೊಲೀಸ್ ಸಿಬ್ಬಂದಿಗಳು ಕಾಡಿನಲ್ಲಿ ನಾಪತ್ತೆಯಾಗಿ ಆತಂಕ ಮೂಡಿಸಿದ ಘಟನೆ ಹೆಬ್ರಿಯಲ್ಲಿ ನಡೆದಿದೆ.
ಎಎನ್ ಎಫ್ ಪೊಲೀಸರು ಶೃಂಗೇರಿ ನಕ್ಸಲ್ ಶೋಧ ಕಾರ್ಯಾಚರಣೆಗಾಗಿ ಆದಿತ್ಯವಾರ ಬೆಳಗ್ಗೆ ಕಿಗ್ಗಾದಿಂದ ಹೆಬ್ರಿಯ ಕಡೆಗೆ ಹೊರಟಿದ್ದರು. ಭಾರಿ ಬಿಸಿಲಿನಿಂದ ಬಾಯಾರಿದ್ದ ಈ ತಂಡ ನೀರನ್ನು ಹುಡುಕುತ್ತಾ ಕಾಡಿನಲ್ಲಿ ಅಲೆದಾಡಿದಾಗ ದಾರಿ ತಪ್ಪಿತ್ತು. ಇದರಿಂದ ನಿಗದಿತ ಅವಧಿಯಲ್ಲಿ ಈ ತಂಡ ಹೆಬ್ರಿ ತಲುಪಲು ಸಾಧ್ಯವಾಗಿಲ್ಲ. ಇದರಿಂದ ಇತರ ಎ ಎನ್ ಎಫ್ ಸಿಬ್ಬಂದಿಗಳು ಆತಂಕಕ್ಕೆ ಒಳಗಾಗಿದ್ದರು. ನಂತರ ಕಾರ್ಯಾಚರಣೆ ನಡೆಸಿ ಕೂಡ್ಲು ಜಲಪಾತದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿದ್ದ ಎಎನ್ ಎಫ್ ಸಿಬ್ಬಂದಿಗಳು ಹೆಬ್ರಿಗೆ ಕರೆತರಲಾಯಿತು