ಮಂಗಳೂರು: ಸೌದಿ ಅರೇಬಿಯಾದಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿ ಸಾವನ್ನಪ್ಪಿದ್ದು, ಇತರ ಹಲವು ಮಂದಿ ಗಾಯಗೊಂಡಿದ್ದಾರೆ.
ಅಡ್ಯಾರ್ಪದವಿನ ವಿನ್ಸೆಂಟ್ ಮೊಂತೇರೊ (37), ಮೂಲ್ಕಿ ಸಮೀಪದ ಕೊಳ್ನಾಡಿನ ಕಾರ್ತಿಕ್ ಸನಿಲ್ (28), ಬಜಪೆ ಸಮೀಪದ ಕೊಂಚಾರಿನ ಭಾಸ್ಕರ ಪೂಜಾರಿ (45), ಹಳೆಯಂಗಡಿಯ ಅಶ್ರಫ್ (29), ಮೂಡುಶೆಡ್ಡೆಯ ಬಾಲಕೃಷ್ಣ ಪೂಜಾರಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಅತೀ ಶೀಘ್ರದಲ್ಲಿ ತಮಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಮೃತರ ಮನೆಯವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.