ಮಂಗಳೂರು: ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಆಶ್ರಯದಲ್ಲಿ ಎ. 25ರಿಂದ 30ರ ವರೆಗೆ ಜರಗುವ "ಪಿಲಿಕುಳ ರಜಾ-ಮಜಾ' ಮಕ್ಕಳ ಬೇಸಗೆ ಶಿಬಿರ ಎ. 25ರಂದು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಉದ್ಘಾಟನೆಗೊಳ್ಳಲಿದೆ.ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ಶಿಬಿರ ನಡೆಯಲಿದೆ.
ಕ್ರಿಯಾತ್ಮಕ ಚಿತ್ರಕಲೆ, ಸ್ವರಾನುಕರಣೆ, ನೆನಪಿಗೆ ಚಿಕಿತ್ಸೆ, ಮೈಮ್, ಜಾದೂ, ರಂಗಕ್ರಿಯೆ, ಸಂಗೀತ, ನಾಟಕ, ಗೊಂಬೆ ತಯಾರಿ, ಪತ್ರಿಕೆ ತಯಾರಿ, ಕೊಲಾಜ್, ವರ್ಲಿಆರ್ಟ್, ಕ್ಲೆಮೋಡಲ್, ಆಟ, ವಿಜ್ಞಾನ ಮಾದರಿ, ವಿನೋದ ಗಣಿತ, ಒರಿಗಾಮಿ, ಫೇಸ್ ಪೈಂಟಿಂಗ್, ಟ್ಯಾಟೂ ಮೊದಲಾದ ಕ್ರಿಯಾಶೀಲ ಚಟುವಟಿಕೆಗಳನ್ನು ಕಾರ್ಯಾಗಾರ ಒಳಗೊಂಡಿದೆ. ಜೊತೆಗೆ ಔಷಧ ಸಸ್ಯಗಳ ಪರಿಚಯ, ಮೃಗಾಲಯ, ಕುಶಲಕರ್ಮಿ ಗ್ರಾಮ, ವಿಜ್ಞಾನ ಕೇಂದ್ರ, ಸಂಸ್ಕೃತಿ ಗ್ರಾಮ, ಗುತ್ತುಮನೆ ಭೇಟಿಯ ವಿಶೇಷ ಅವಕಾಶವನ್ನು ಈ ಶಿಬಿರ ಹೊಂದಿದೆ.