ಸುವರ್ಣ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಉಜಿರೆಯ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶವು ಮೇ 8 ರಂದು ಆದಿತ್ಯವಾರ ಕಾಲೇಜಿನಲ್ಲಿ ನಡೆಯಲಿದ್ದು ಆಮಂತ್ರಣ ಪತ್ರವನ್ನು ಶುಕ್ರವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ ಮತ್ತು ಸದಸ್ಯರಾದ ಪ್ರೊ.ಎಸ್. ಸತೀಶ್ವಂದ್ರ. ಪ್ರೊ. ಶೈಲೇಶ್ ಕುಮಾರ್, ಮೊಹಮ್ಮದ್ ಯು. ಜಗದೀಶ್ ಪ್ರಸಾದ್, ಗಿರೀಶ್ ಪ್ರಭು, ಜಯರಾಮ ಬಂಗೇರ, ನಿತ್ಯಾನಂದ ನಾವರ ಮತ್ತು ಕೃಷ್ಣ ಪ್ರಶಾಂತ್ ಉಪಸ್ಥಿತರಿದ್ದರು.