ಮಂಗಳೂರು: ಹಾಡುಹಗಲೇ ಯುವಕನೋರ್ವನನ್ನು ಮಾರಾಕಾಯುಧಗಳಿಂದ ಕೊಚ್ಚಿ ಕೊಲೆಗೈದ ಘಟನೆ ಮಂಗಳೂರಿನಲ್ಲಿ ಆದಿತ್ಯವಾರ ನಡೆದಿದೆ. ಮಂಗಳೂರಿನ ಲಾಲ್ ಬಾಗ್ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ರಿಕ್ಷಾದಲ್ಲಿ ಬಂದ ದುಷ್ಕರ್ಮಿಗಳು ಯುವಕನನ್ನು ಕೊಚ್ಚಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಗೈಯಲ್ಪಟ್ಟ ಯುವಕ ಹೊಯ್ಗೆ ಬೈಲ್ ನಿವಾಸಿ ರೋಹಿತ್(೪೩) ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಮರದ ತುಂಡು ಹಾಗೂ ಕಲ್ಲು ಪತ್ತೆಯಾಗಿದೆ. ಈ ಬಗ್ಗೆ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.