Friday 29th, March 2024
canara news

ಮಂಗಳೂರಿಗೆ ನೀರು ಒದಗಿಸಲು ಕುದುರೆಮುಖ ಸಂಸ್ಥೆ ಒಪ್ಪಿಗೆ

Published On : 11 May 2016   |  Reported By : Canaranews Network


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬರ ಪರಿಸ್ಥಿತಿಯನ್ನು ಎದುರಿಸಲು ಲಕ್ಯಾ ಅಣೆಕಟ್ಟಿನಿಂದ ಪಣಂಬೂರಿನ ಕುದುರೆಮುಖ ಅದಿರು ಸಂಸ್ಥೆಗೆ 0.5 ಎಂಜಿಡಿ ನೀರನ್ನು ನೀಡಲು ಕುದುರೆಮುಖ ಸಂಸ್ಥೆಯ ಅಧ್ಯಕ್ಷ ಮಲಯ ಚಟರ್ಜಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಬಿ.ಎ. ಮೊದಿನ್ ಬಾವಾ ತಿಳಿಸಿದ್ದಾರೆ.

ಶಾಸಕರು ಸಂಸ್ಥೆಯ ಅಧ್ಯಕ್ಷರ ಜತೆ ಮಾತನಾಡಿದ ಸಂದರ್ಭ ಈ ಒಪ್ಪಿಗೆ ನೀಡಿದ್ದು ನೀರನ್ನು ಪಣಂಬೂರಿನ ಮನಪಾ ಪಂಪ್ಹೌಸ್ಗೆ ಪಂಪಿಂಗ್ ಮಾಡಲು ಸೂಚಿಸಲಾಗಿದೆ ಎಂದು ಶಾಸಕರು ಹೇಳಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಗಿರುವ ಹಿನ್ನೆಲೆಯಲ್ಲಿ ಅದಿರು ಸಂಸ್ಥೆಯ ಉದ್ದೇಶಕ್ಕಾಗಿ ಮಾತ್ರ ಲಕ್ಯಾ ಅಣೆಕಟ್ಟಿನ ನೀರನ್ನು ಬಳಸಬೇಕು ಎಂದು ಸುಪ್ರೀಂ ಕೋರ್ಟ್ನ ಸ್ಪಷ್ಟ ಅದೇಶವಿದೆ. ಪ್ರಸ್ತುತ ಕುದುರೆಮುಖ ಸಂಸ್ಥೆಗೆ ಲಕ್ಯಾ ಜಲಾಶಯದಿಂದ 1 ಎಂಜಿಡಿ ನೀರು ಮಾತ್ರ ಬರುತ್ತಿದ್ದು ಮಂಗಳೂರಿನ ಜಲಕ್ಷಾಮದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಾಗೂ ಮಳೆ ಬರುವ ತನಕ ಕುಡಿಯುವ ಉದ್ದೇಶಕ್ಕಾಗಿ ಮಾತ್ರ 0.5 ಎಂಜಿಡಿ ನೀರನ್ನು ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here