ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬರ ಪರಿಸ್ಥಿತಿಯನ್ನು ಎದುರಿಸಲು ಲಕ್ಯಾ ಅಣೆಕಟ್ಟಿನಿಂದ ಪಣಂಬೂರಿನ ಕುದುರೆಮುಖ ಅದಿರು ಸಂಸ್ಥೆಗೆ 0.5 ಎಂಜಿಡಿ ನೀರನ್ನು ನೀಡಲು ಕುದುರೆಮುಖ ಸಂಸ್ಥೆಯ ಅಧ್ಯಕ್ಷ ಮಲಯ ಚಟರ್ಜಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಬಿ.ಎ. ಮೊದಿನ್ ಬಾವಾ ತಿಳಿಸಿದ್ದಾರೆ.
ಶಾಸಕರು ಸಂಸ್ಥೆಯ ಅಧ್ಯಕ್ಷರ ಜತೆ ಮಾತನಾಡಿದ ಸಂದರ್ಭ ಈ ಒಪ್ಪಿಗೆ ನೀಡಿದ್ದು ನೀರನ್ನು ಪಣಂಬೂರಿನ ಮನಪಾ ಪಂಪ್ಹೌಸ್ಗೆ ಪಂಪಿಂಗ್ ಮಾಡಲು ಸೂಚಿಸಲಾಗಿದೆ ಎಂದು ಶಾಸಕರು ಹೇಳಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಗಿರುವ ಹಿನ್ನೆಲೆಯಲ್ಲಿ ಅದಿರು ಸಂಸ್ಥೆಯ ಉದ್ದೇಶಕ್ಕಾಗಿ ಮಾತ್ರ ಲಕ್ಯಾ ಅಣೆಕಟ್ಟಿನ ನೀರನ್ನು ಬಳಸಬೇಕು ಎಂದು ಸುಪ್ರೀಂ ಕೋರ್ಟ್ನ ಸ್ಪಷ್ಟ ಅದೇಶವಿದೆ. ಪ್ರಸ್ತುತ ಕುದುರೆಮುಖ ಸಂಸ್ಥೆಗೆ ಲಕ್ಯಾ ಜಲಾಶಯದಿಂದ 1 ಎಂಜಿಡಿ ನೀರು ಮಾತ್ರ ಬರುತ್ತಿದ್ದು ಮಂಗಳೂರಿನ ಜಲಕ್ಷಾಮದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಾಗೂ ಮಳೆ ಬರುವ ತನಕ ಕುಡಿಯುವ ಉದ್ದೇಶಕ್ಕಾಗಿ ಮಾತ್ರ 0.5 ಎಂಜಿಡಿ ನೀರನ್ನು ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.