ಮಂಗಳೂರಿಗೆ ನೀರಿನ ಅಭಾವ ಎದುರಾಗಿರುವ ಹಿನ್ನೆಲೆಧಿಯಲ್ಲಿ ಕುದುರೆಮುಖದ ಲಕ್ಯಾ ಜಲಾಶಯದಿಂದ ನೀರು ಪಡೆಯಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.
ಮೇಯರ್ ಹರಿನಾಥ್ ನೇತೃತ್ವದಲ್ಲಿ ಕಾರ್ಪೊರೇಟರ್ ಹಾಗೂ ಅಧಿಕಾರಿಗಳ ತಂಡ ಸೋಮವಾರ ಲಕ್ಯಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಸೇರಿರುವ ಲಕ್ಯಾ ಜಲಾಶಯದಲ್ಲಿ ಯಥೇತ್ಛ ನೀರಿನ ಸಂಗ್ರಹವಿದೆ. ಪ್ರಸ್ತುತ ಕಂಪೆನಿಯ ಮಂಗಳೂರು ಸ್ಥಾವರಕ್ಕೆ ದಿನಂಪ್ರತಿ 2 ಎಂಜಿಡಿ ನೀರು ಗುರುತ್ವಾಕರ್ಷಣ ಶಕ್ತಿ ಮೂಲಕ ಸರಬರಾಜು ಆಗುತ್ತಿದೆ ಎಂದು ಮೇಯರ್ ತಿಳಿಸಿದರು.
ಜಿಲ್ಲೆಯಲ್ಲಿ ತೀವ್ರ ಬರದ ಹಿನ್ನೆಲೆಯಲ್ಲಿ ಲಕ್ಯಾದಿಂದ ಕುಡಿಯುವ ಉದ್ದೇಶಕ್ಕಾಗಿ ನೀರು ತರಲು ಅವಕಾಶವಿದೆ. ಪಂಪ್ ಬಳಸಿದರೆ ದಿನವೊಂದಕ್ಕೆ ಸುಮಾರು 6 ಎಂಜಿಡಿ ನೀರು ಸರಬರಾಜಿಗೆ ಅವಕಾಶವಿದೆ. ಇದು ಪಣಂಬೂರು ಹಾಗೂ ಸುರತ್ಕಲ್ ಭಾಗದ ಜನರ ಕುಡಿಯುವ ನೀರು ಆವಶ್ಯಕತೆಯನ್ನು ಪೂರೈಸಲು ಸಾಕಾಗಲಿದೆ ಎಂದರು.