ಮೂಡುಬಿದಿರೆ ಶ್ರೀ ಆದಿಶಂಕರ ಸ್ಥಾನಿಕ ಬ್ರಾಹ್ಮಣ ಪರಿಷತ್(ರಿ.) ಆಶ್ರಯದಲ್ಲಿ ಮೇ 15 ರಂದು ಅಲಂಗಾರು ಮಾತೃಛಾಯಾದಲ್ಲಿ ಶ್ರೀ ಶಂಕರ ಜಯಂತಿ ನಡೆಯಿತು. ಈ ಅಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶ್ರೀ ಶಂಕರ ಸ್ತೋತ್ರ ಸ್ಪರ್ಧೆ, ರುದ್ರಾಭಿಷೇಕ, ಪಾರಾಯಣ, ನಡೆದು ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ, ದ.ಕ. ಜಿಲ್ಲಾ ಮಟ್ಟದ ಪ್ರೌಢಶಾಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ರಾಯೀ ರಾಜ ಕುಮಾರರನ್ನು ಸಂಮಾನಿಸಲಾಯಿತು.
ವೇದಿಕೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾದ ನಿಕಟ ಪೂರ್ವ ಅಧ್ಯಕ್ಷ ಸಿ.ಎಸ್. ರಾವ್, ಪರಿಷತ್ ಗೌರವಾಧ್ಯಕ್ಷ ಬಿ.ಕೆ ರಾವ್, ಅಧ್ಯಕ್ಷ ಬೊಕ್ಕಸ ಚಂದ್ರಶೇಖರ ರಾವ್, ಕಾರ್ಯದರ್ಶಿ ಜಗದೀಶ ರಾವ್, ಪಡುಬಿದ್ರೆ ಸಂಘದ ಪದಾಧಿಕಾರಿಗಳು ಹಾಜರಿದ್ದರು