ಮುಂಬಯಿ, ಮೇ.18: ಮಹಾನಗರದಲ್ಲಿನ ಯುವೋದ್ಯಮಿ, ಹೆಸರಾಂತ ಕಲಾವಿದ, ರಂಗಕರ್ಮಿ, ನಾಟಕ ಕಾರ, ನಿರ್ದೇಶಕ ಅರವಿಂದ ಶೆಟ್ಟಿ ಕೊಜವಳ್ಳಿ ನಿರ್ದೇಶನದ `ಕಲಯ ಥಸ್ಮೀ ನಮಃ' ನಾಟಕಕ್ಕೆ ಇದೇ ಮೇ. 23ರ ಸೋಮವಾರ ಮುಹೂರ್ತ ನೆರವೇರಲಿದೆ.
ಅಂದು ಸಂಜೆ 6.00 ಗಂಟೆಗೆ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ರಂಗಭೂಮಿಯ ಹಿರಿಯ ಕಲಾವಿದರು ಆಗಮಿಸಿ `ಕಲಯ ಥಸ್ಮೀ ನಮಃ' ನಾಟಕದ ಮುಹೂರ್ತ ನೆರವೇರಿಸಲಿದ್ದಾರೆ.
ಒಲ್ತು ಒಟ್ಟಾತರ, ರಿಕ್ಷಾ ನಂಬರ್ 123, ಪುಲ್ಲಿನ ಮದ್ಮೆ ಇತ್ಯಾದಿ ಅನೇಕ ನಾಟಕಗಳನ್ನು ರಚಿಸಿ, ನಟಿಸಿ ರಂಗಭೂಮಿಯಲ್ಲಿ ಪ್ರತಿಷ್ಠೆಯನ್ನು ಗಳಿಸಿರುವ ಅರವಿಂದ ಶೆಟ್ಟಿ ಕೊಜವಳ್ಳಿ ರಚಿಸಿರುವ `ಕಲಯ ಥಸ್ಮೀ ನಮಃ' ನಾಟಕವನ್ನು ಪ್ರಸಿದ್ಧ ರಂಗಕರ್ಮಿ ಕೃಷ್ಣರಾಜ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಕೇವಲ ನಾಲ್ಕೈದು ಪಾತ್ರಧಾರಿಗಳ ನಟನೆಯ ಇದೊಂದು ವಿಶೇಷವಾದ ಸಾಮಾಜಿಕ ನಾಟಕವಾಗಿದೆ. ಆ್ಯಂಕರ್ ಕಲ್ಚರಲ್ ಗ್ರೂಪ್ ಮುಂಬಯಿ ಪ್ರಸ್ತುತ ಪಡಿಸಲಿದ್ದು ಇದರ ಕಲಾವಿದದೇ ನಾಟಕದಲ್ಲಿ ಅಭಿನಯಿಸಲಿರುವರು. ಹಿರಿಯ ರಂಗನಟ, ಸಿನೇಮಾ ಕಲಾವಿದ ಭವಾನಿ ಶಂಕರ್ ಶೆಟ್ಟಿ ಪ್ರಧಾನ ಭೂಮಿಕೆಯಲ್ಲಿ ಕಾಣಿಸುತ್ತಾ ಮತ್ತೆ ರಂಗಭೂಮಿಯಲ್ಲಿ ಮೆರೆಯಲಿರುವುದು ಈ ನಾಟಕದ ವೈಶಿಷ್ಟ ್ಯತೆಯಾಗಿದೆ.