ಮಂಗಳೂರು: ಸೌದಿ ಅರೇಬಿಯಾದ ಜುಬೈಲ್ನ ಖಸಿಂ ರಸ್ತೆಯಲ್ಲಿ ಸಂಭವಿಸಿದ ಕಾರು ಅಫಘಾತದಲ್ಲಿ ಮಂಗಳೂರು ಹೊರವಲಯದ ಉಳ್ಳಾಲದ ಮೊಂಟೆಪದವು ಮೂಲದ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡು ಖಸಿಂನ ಸೆಂಟ್ರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಉಮ್ರಾ ಯಾತ್ರೆಗೆ ತೆರಳಿ ಮದೀನದಿಂದ ವಾಪಸಾಗುತ್ತಿದ್ದ ಮೊಂಟೆಪದವು ನಿವಾಸಿಗಳಾದ ಖತೀಜಮ್ಮ (50) ಮತ್ತು ಅವರ ಪುತ್ರ ಅಬ್ಟಾಸ್ (29) ಸ್ಥಳದಲ್ಲಿಯೇ ಮೃತಪಟ್ಟವರು.ಖತೀಜಮ್ಮ ಅವರ ಪತಿ ಮಹಮ್ಮದ್(60) ಹಾಗೂ ಅಬ್ಟಾಸ್ ಅವರ ಪತ್ನಿ ಮೈನಾಝ್ (20) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊಂಟೆಪದವು ನಿವಾಸಿ ಅಬ್ಟಾಸ್ ಸೌದಿ ಅರೆಬಿಯಾದ ಜುಬೈಲ್ನಲ್ಲಿ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬ್ಟಾಸ್ ಅವರುಹದಿನೈದು ದಿನಗಳ ಹಿಂದೆ ಪತ್ನಿ ಹಾಗೂ ಹೆತ್ತವರನ್ನು ಉಮ್ರಾ ಯಾತ್ರೆಗೆ ತೆರಳಲು ಜುಬೈಲ್ಗೆ ಕರೆಸಿದ್ದರು.
ಜುಬೈಲ್ನಿಂದ ಕೇರಳ ಮೂಲದ ಸ್ನೇಹಿತನ ಕುಟುಂಬದ ನಾಲ್ಕು ಮಂದಿ ಹಾಗೂ ಅಬ್ಟಾಸ್ ಕುಟುಂಬದ ನಾಲ್ಕು ಮಂದಿಒಟ್ಟಾಗಿ ಉಮ್ರಾ ಯಾತ್ರೆಗೆ ಕಾರಿನಲ್ಲಿ ತೆರಳಿದ್ದರು. ರವಿವಾರ ರಾತ್ರಿ ಉಮ್ರಾದಿಂದ ಮತ್ತೆ ವಾಸಸ್ಥಳ ಜುಬೈಲ್ಗೆ ಮರಳುತ್ತಿ ದ್ದಾಗ ತಡರಾತ್ರಿ 2 ಗಂಟೆ ಸುಮಾರಿಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ತಾಯಿ ಹಾಗೂ ಮಗ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರ ಮೊಂಟೆಪದವಿನ ಮನೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ರವಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.