ಮಂಗಳೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಗೆ ಈ ಬಾರಿ ಸಿಹಿಸುದ್ದಿ. ಕಳೆದ ವರ್ಷ ರಾಜ್ಯದಲ್ಲಿ 8ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 3ನೇ ಸ್ಥಾನ ಪಡೆದುಕೊಂಡಿದೆ. ಆ ಮೂಲಕ ಟಾಪ್ ಮೂರರೊಳಗಿನ ಸ್ಥಾನಕ್ಕಾಗಿ ಶ್ರಮಿಸಿದ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಶ್ರಮ ಫಲ ನೀಡಿದೆ.2015-16ನೇ ಸಾಲಿನಲ್ಲಿ ದ.ಕ. ಜಿಲ್ಲೆಯಿಂದ ಒಟ್ಟು 15,291 ಹುಡುಗರು ಮತ್ತು 15,375 ಹುಡುಗಿಧಿಯರು ಸೇರಿ ಒಟ್ಟು 30,666 ಮಂದಿ ಹಾಜರಾಗಿದ್ದು , ಈ ಪೈಕಿ 12,836 ಮಂದಿ ಹುಡುಗರು ಮತ್ತು 14,152 ಮಂದಿ ಹುಡುಗಿಯರು ಸೇರಿ ಒಟ್ಟು 26,988 ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಗೆ ಈ ಬಾರಿ ಶೇ. 88.01 ಫಲಿತಾಂಶ ಬಂದಿದೆ.
ಬೆಳ್ತಂಗಡಿಯ ವಿದ್ಯಾರ್ಥಿ ರಾಜ್ಯಕ್ಕೆ ದ್ವಿತೀಯ
ದ.ಕ. ಜಿಲ್ಲೆಯ ಬೆಳ್ತಂಗಡಿಯ ಲಾಯಿಲ ಸೈಂಟ್ ಮೇರೀಸ್ ಆಂಗ್ಲ ಶಾಲೆಯ ವಿದ್ಯಾರ್ಥಿ ಸುಶ್ರುತ್ ಯು.ಕೆ. 624 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಆದಿತ್ಯ ಕಾಮತ್, ಸುರತ್ಕಲ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ ರಮ್ಯಾಶ್ರೀ ಅವರಿಗೆ 623 ಅಂಕ ಲಭಿಸಿದೆ. ಡೊಂಗರಕೇರಿಯ ಕೆನರಾ ಪ್ರೌಢಶಾಲೆ (ಪ್ರಧಾನ) ವಿದ್ಯಾರ್ಥಿ ಅಜಯ್ ಕೆ. ಪಿ., ಉರ್ವ ಕೆನರಾ ಹೈಸ್ಕೂಲ್ನ ಶಶಾಂಕ್ ಎಸ್., ಕೊಡಿಯಾಲ್ಬೈಲ್ ಸೈಂಟ್ ಅಲೋಶಿಯಸ್ ಶಾಲೆಯ ಸೊಹಾನ್ ಕೋಟ್ಯಾನ್ 622 ಅಂಕ ಗಳಿಸಿದ್ದಾರೆ.