ಮಂಗಳೂರು: ಮಂಗಳೂರಿನ ಕೆಂಜಾರಿನಲ್ಲಿ ಆರು ವರ್ಷಗಳ ಹಿಂದೆ ಸಂಭವಿಸಿದ ವಿಮಾನ ದುರಂತದಲ್ಲಿ ಮಡಿದವರಿಗೆ ರವಿವಾರ ಕೂಳೂರು ಸ್ಮಾರಕ ಸ್ಥಳದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾಧಿನಾಥ ರೈ ಅವರು ಸಮಾಧಿ ಸ್ಥಳದಲ್ಲಿ ಹೂಗುಚ್ಛ ಇಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಕಾಲ ಮೌನ ಪ್ರಾರ್ಥನೆ ನಡೆಸಲಾಯಿತು.
ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ, ನವಮಂಗಳೂರು ಬಂದರು ಮಂಡಳಿ ಡೆಪ್ಯುಟಿ ಚೇರ್ಮನ್ ಸುರೇಶ್ ಪಿ. ಶಿರ್ವಾಡ್ಕರ್, ಕಾರ್ಪೊರೇಟರ್ ರಘುವೀರ್ ಪಣಂಬೂರು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಅಪರ ಜಿಲ್ಲಾಧಿಕಾರಿ ಕುಮಾರ್, ವಿಮಾನ ನಿಲ್ದಾಣದ ಪ್ರಮುಖ ಅಧಿಕಾರಿಗಳಾದ ಎಜಿಎಂ ಪುಲ್ಮಾರೆ, ಎಲ್.ಕೆ. ಸಿಂಗ್, ಗೋವರ್ಧನ ರೆಡ್ಡಿ , ಜನಾದìನ್ ಮತ್ತಿತರರು ಉಪಸ್ಥಿತರಿದ್ದರು.
2010ರ ಮೇ 22ರಂದು ಬೆಳಗ್ಗೆ ಆರು ಗಂಟೆಯ ಸುಮಾರಿಗೆ ಬಜಪೆ ವಿಮಾನ ನಿಲ್ದಾಣದ ಸಮೀಪವೇ ಇರುವ ಕೆಂಜಾರಿನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ ಮಕ್ಕಳು ಸೇರಿದಂತೆ ಒಟ್ಟು 158 ಮಂದಿ ಪ್ರಯಾಣಿಕರು ಜೀವಂತ ಭಸ್ಮವಾದರು. ಕೇವಲ 8 ಮಂದಿ ಬದುಕುಳಿದ್ದರು.