ಮುಂಬಯಿ, ಮೇ. 25: ಇದೇ ಜೂನ್.03ರ ಶುಕ್ರವಾರ ಸಂಜೆ 5.00ಗಂಟೆಗೆ ಬಹ್ರೇಯ್ನ್ ಅಲ್ಲಿನ ಮನಾಮದ ಶ್ರೀ ಕೃಷ್ಣ ಮಂದಿರದಲ್ಲಿ ಜಿ.ಎಸ್.ಎಸ್ ಬಹರೈನ್ ಬಿಲ್ಲವಾಸ್ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಸತ್ಯ ಹರಿಶ್ಚಂದ್ರ ಹರಿಕಥಾ ಪಾರಾಯಣ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.ಬಹಳ ವಿಜೃಂಭನೆಯಿಂದ ಜರುಗಿಸಲಾಗುವ ಉಭಯ ಕಾರ್ಯಕ್ರಮಗಳಲ್ಲಿ ಮುಂಬಾಯಿಯ ಪ್ರಸಿದ್ಧ ಪುರೋಹಿತ ಶ್ರೀ ಉಳ್ಳೂರು ಧನಂಜಯ ಶಾಂತಿ ತಮ್ಮ ಪೌರೋಹಿತ್ಯದಲ್ಲಿ ನೆರವೇರಿಸಲಿದ್ದಾರೆ ಎಂದು ಕಾರ್ಯಕ್ರಮದ ಪ್ರಧಾನ ಸಂಘಟಕ ರಾಜ್ಕುಮಾರ್ ತಿಳಿಸಿದ್ದಾರೆ.