ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ್ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಬಗ್ಗೆ ವ್ಯಾಟ್ಸಪ್ ಗ್ರೂಪ್ ವೊಂದರಲ್ಲಿ ಅವಹೇಳನಕಾರಿ ಸಂದೇಶ ಬಂದಿದೆ ಎಂದು ಆರೋಪಿಸಿ ನರೇಶ್ ಶೆಣೈ ಪತ್ನಿ ಸುಮನಾ ಶೆಣೈ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ದೇವಳದ ಭಕ್ತರು ಎಂಬ ಹೆಸರಿನಲ್ಲಿರುವ ಗ್ರೂಪ್ ನಲ್ಲಿ ೪೧ ಸದಸ್ಯರಿದ್ದು, ಈ ಗ್ರೂಪ್ ನಲ್ಲಿ ಇತ್ತೀಚೆಗೆ ಓರ್ವ ಸದಸ್ಯ ನರೇಶ್ ಶೆಣೈ ಭಾವಚಿತ್ರ ಹಾಕಿ ಡೆಡ್ ಆರ್ ಅಲೈವ್ ನರೇಶ್ ಶೆಣೈ ವಾಂಟೆಡ್ ಎಂಬ ಸಂದೇಶವನ್ನ್ನು ಹಾಕಿದ್ದರು. ಈ ಸಂದೇಶವನ್ನು ಗ್ರೂಪ್ ನಲ್ಲಿದ್ದವರೊಬ್ಬರು ಸುಮನ ಶೆಣೈಗೆ ನೀಡಿದ್ದು, ಇದರ ಆಧಾರದ ಮೇಲೆ ಸುಮನ ಶೆಣೈ ೪೧ ಸದಸ್ಯರ ಗ್ರೂಪ್ ವಿರುದ್ಧ ೨ನೇ ಜೆ ಎಂ ಎಫ್ ಸಿ ಕೋರ್ಟಿನಲ್ಲಿ ಧಾವೆಯನ್ನು ಹೂಡಿದ್ದಾರೆ.