Wednesday 24th, April 2024
canara news

ಕೊಲ್ಯ ಮಠಾಧೀಶ ಜಗದ್ಗುರು ರಾಜಯೋಗಿ ಶ್ರೀ ರಮಾನಂದ ಸ್ವಾಮೀಜಿ ವೃಂದಾವನೈಕ್ಯ

Published On : 26 May 2016   |  Reported By : Canaranews Network


ಮಂಗಳೂರು: ಶ್ರೀ ಕ್ಷೇತ್ರ ಕೊಲ್ಯ ಮಠಾಧೀಶ ಜಗದ್ಗುರು ರಾಜಯೋಗಿ ಶ್ರೀ ರಮಾನಂದ ಸ್ವಾಮೀಜಿ ಅವರು ಸೋಮವಾರದಂದು ದೈವಕ್ಯರಾಗಿದ್ದು, ಅವರ ಸಮಾಧಿ ವೃಂದಾವನ ಪ್ರಕ್ರಿಯೆ ಮಂಗಳವಾರ ಬೆಳಿಗ್ಗೆ ವೈದಿಕ ವಿಧಾನಗಳೊಂದಿಗೆ ನಡೆದು ಸ್ವಾಮೀಜಿ ವೃಂದಾವನಸ್ಥರಾದರು.ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದವರು ಕಳೆದ 45 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಸೋಮವಾರ ಮಧ್ಯಾಹ್ನ 1.45 ಕ್ಕೆ ವಿಧಿವಶರಾದರು.ಮಂಗಳವಾರ ಬೆಳಿಗ್ಗೆ 8ರಿಂದ ಸ್ವಾಮಿಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸ್ವಾಮೀಜಿ ತನ್ನ ನಿಧನ ನಂತರ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕೆಂದು ಪತ್ರವೊಂದರಲ್ಲಿ ಬರೆದಿಟ್ಟಿದ್ದರೂ, ಪೇಜಾವರ ಸ್ವಾಮಿಗಳ ಸಲಹೆಯನ್ನು ಮನ್ನಿಸಲಾಯಿತು. ಅದರಂತೆಯೇ ವೈದಿಕ ವಿಧಾನಗಳು ನಡೆಸಲಾಯಿತು.ಯತಿಗಳು, ಧಾರ್ಮಿಕ ಮುಖಂಡರು, ಜನನಾಯಕರು, ಸಮಾಜಸೇವಕರು, ಶ್ರೀ ಮಠದ ಭಕ್ತರು, ಸ್ವಾಮಿಯ ಅನುಯಾಯಿಗಳು ಸೇರಿದಂತೆ ಸಹಸ್ರ ಸಂಖ್ಯೆಯ ಜನರು ವೃಂದಾವನ ವಿಧಿಗೆ ಸಾಕ್ಷಿಯಾದರು




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here