ಮಂಗಳೂರು: ಶ್ರೀ ಕ್ಷೇತ್ರ ಕೊಲ್ಯ ಮಠಾಧೀಶ ಜಗದ್ಗುರು ರಾಜಯೋಗಿ ಶ್ರೀ ರಮಾನಂದ ಸ್ವಾಮೀಜಿ ಅವರು ಸೋಮವಾರದಂದು ದೈವಕ್ಯರಾಗಿದ್ದು, ಅವರ ಸಮಾಧಿ ವೃಂದಾವನ ಪ್ರಕ್ರಿಯೆ ಮಂಗಳವಾರ ಬೆಳಿಗ್ಗೆ ವೈದಿಕ ವಿಧಾನಗಳೊಂದಿಗೆ ನಡೆದು ಸ್ವಾಮೀಜಿ ವೃಂದಾವನಸ್ಥರಾದರು.ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದವರು ಕಳೆದ 45 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಸೋಮವಾರ ಮಧ್ಯಾಹ್ನ 1.45 ಕ್ಕೆ ವಿಧಿವಶರಾದರು.ಮಂಗಳವಾರ ಬೆಳಿಗ್ಗೆ 8ರಿಂದ ಸ್ವಾಮಿಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸ್ವಾಮೀಜಿ ತನ್ನ ನಿಧನ ನಂತರ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕೆಂದು ಪತ್ರವೊಂದರಲ್ಲಿ ಬರೆದಿಟ್ಟಿದ್ದರೂ, ಪೇಜಾವರ ಸ್ವಾಮಿಗಳ ಸಲಹೆಯನ್ನು ಮನ್ನಿಸಲಾಯಿತು. ಅದರಂತೆಯೇ ವೈದಿಕ ವಿಧಾನಗಳು ನಡೆಸಲಾಯಿತು.ಯತಿಗಳು, ಧಾರ್ಮಿಕ ಮುಖಂಡರು, ಜನನಾಯಕರು, ಸಮಾಜಸೇವಕರು, ಶ್ರೀ ಮಠದ ಭಕ್ತರು, ಸ್ವಾಮಿಯ ಅನುಯಾಯಿಗಳು ಸೇರಿದಂತೆ ಸಹಸ್ರ ಸಂಖ್ಯೆಯ ಜನರು ವೃಂದಾವನ ವಿಧಿಗೆ ಸಾಕ್ಷಿಯಾದರು