Friday 29th, March 2024
canara news

ಪುತ್ತೂರು ತುಳು ಕೂಟ ನೂತನ ಅಧ್ಯಕ್ಷ ವಿಕುಭ ಹೆಬ್ಬಾರಬೈಲು

Published On : 08 Jun 2016   |  Reported By : Canaranews Network


ಪುತ್ತೂರು: ನಲ್ವತ್ತಮೂರು ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಪುತ್ತೂರು ತುಳುಕೂಟದ ನೂತನ ಅಧ್ಯಕ್ಷರಾಗಿ ಪೂವರಿ ಮಾಸಿಕ ಪತ್ರಿಕೆಯ ಸಂಪಾದಕ ವಿಜಯಕುಮಾರ ಭಂಡಾರಿ ಹೆಬ್ಬಾರಬೈಲು ಅವಿರೋಧವಾಗಿ ಚುನಾಯಿತರಾಗಿದ್ದಾರೆ. ಪುತ್ತೂರು ಅನುರಾಗ ವಠಾರದಲ್ಲಿ ನಡೆದ ಪುತ್ತೂರು ತುಳು ಕೂಟದ ಮಹಾಸಭೆಯಲ್ಲಿ 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು.

ತುಳು ಕೂಟದ ಉಪಾಧ್ಯಕ್ಷರಾಗಿ ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ಪತ್ರಕರ್ತ ಉಮಾಪ್ರಸಾದ ರೈ ನಡುಬೈಲು, ಖಜಾಂಚಿ ರಂಗ ಭೂಮಿ ಕಲಾವಿದ ಸತೀಶ್ ಬಲ್ಯಾಯ, ಜತೆ ಕಾರ್ಯದರ್ಶಿ ನ್ಯಾಯವಾದಿ ಮಹಾಬಲ ಗೌಡ ಎ. ಆಯ್ಕೆಯಾಗಿದ್ದಾರೆ.

 

ನಿಕಟ ಪೂರ್ವಾಧ್ಯಕ್ಷ ಕುಂಬ್ರ ದುರ್ಗಾಪ್ರಸಾದ ರೈ, ಗೌರವ ಸಲಹೆಗಾರರಾಗಿ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಬಿ. ಪುರಂದರ ಭಟ್, ಪ್ರೊ.ವಿ.ಬಿ.ಅರ್ತಿಕಜೆ, ಕುದ್ಕಾಡಿ ವಿಶ್ವನಾಥ ರೈ, ದಂಬೆಕಾನ ಸದಾಶಿವ ರೈ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯಕುಮಾರ್ ರೈ ಕೊರಂಗ, ಕೃಷ್ಣಪ್ಪ ಶಿವನಗರ, ರೋಶನ್ ರೈ ಬನ್ನೂರು, ಜಯಪ್ರಕಾಶ್ ರೈ ನೂಜಿಬೈಲು, ಸೀತಾರಾಮ ರೈ ಬನ್ನೂರು, ರಾಮಣ್ಣ ರೈ ನೇಮಕಗೊಂಡಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ ರೈ ಚುನಾವಣಾಧಿಕಾರಿಯಾಗಿದ್ದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here