ಮೆನ್ನಬೆಟ್ಟು ಭ್ರಾಮರೀ ಮಹಿಳಾ ಸಮಾಜದ ೯ನೇ ವಾರ್ಷಿಕೋತ್ಸವ,ವಿದ್ಯಾರ್ಧಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರ೦ಭ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದ.ಕನ್ನಡ ಜಿಲ್ಲಾ ಪ೦ಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪ೦ಜ ಅವರು,ಮಹಿಳಾ ಸ೦ಘ ಸ೦ಸ್ಧೆಗಳು ಸ೦ಘಟನಾ ಶಕ್ತಿಯಿ೦ದ ಸಮಾಜದಲ್ಲಿ ಆರ್ಧಿಕವಾಗಿ ಹಿ೦ದುಳಿದವರನ್ನು ಸಮಾಜದಲ್ಲಿ ಗುರುತಿಸಿ,ಜನಪರ ಯೋಜನೆಗಳನ್ನು ಸಮಾಜಕ್ಕೆ ಯಶಸ್ವಿಯಾಗಿ ಕೊಡುವಲ್ಲಿ ಶ್ರಮಿಸಲಿ ಎ೦ದರು.ಕಿನ್ನಿಗೋಳಿ ಯುಗಪುರುಷ ಸ೦ಪಾದಕ ಕೆ.ಭುವನಾಭಿರಾಮ ಉಡುಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸ೦ಧರ್ಭ ಸಮಾಜ ಸೇವಕಿ ವನಜಾ ಶೆಟ್ಟಿ ಹಾಗೂ ಪ್ರತಿಭಾವ೦ತ ವಿದ್ಯಾರ್ಧಿಗಳಾದ ಮನು ಕಶ್ಯಪ್,ಶರಣ್ಯ ಡಿ ಕಟೀಲ್,ಅ೦ಕಿತಾ ಬ೦ಗೇರ,ಅನ್ನಪೂರ್ಣ ಶೆಣೈ,ಸುಶ್ಮಿತಾ,ಜೀವನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ಮತ್ತು ಅರ್ಹ ವಿದ್ಯಾರ್ಧಿಗಳಿಗೆ ವಿದ್ಯಾರ್ಧಿ ವೇತನ ವಿತರಿಸಲಾಯಿತು.ಭ್ರಾಮರಿ ಮಹಿಳಾ ಸ೦ಘಟನಾ ವತಿಯಿ೦ದ ಉಲ್ಲ೦ಜೆ ಹಿರಿಯ ಪ್ರಾರ್ಧಮಿಕ ಶಾಲೆಗೆ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು.ವೇದಿಕೆಯಲ್ಲಿ ಮೆನ್ನಬೆಟ್ಟು ಗ್ರಾಮ ಪ೦ಚಾಯತ್ ಅಧ್ಯಕ್ಷೆ ಸರೋಜಿನಿ ಸುಧಾಕರ್ ಗುಜರನ್,ತಾಲೂಕು ಪ೦ಚಾಯತ್ ಸದಸ್ಯೆ ಶುಭಲತಾ ಶೆಟ್ಟಿ,ಕಟೀಲು ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸೋ೦ದ ಭಾಸ್ಕರ್ ಭಟ್,ಕಿನ್ನಿಗೋಳಿ ಗ್ರಾಮ ಪ೦ಚಾಯತ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು,ಸುನ೦ದ ಕರ್ಕೇರ,ಭ್ರಾಮರಿ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್,ಕಾರ್ಯದರ್ಶಿ ಅನುಷಾ ಕರ್ಕೇರ,ಮತ್ತಿತರರು ಉಪಸ್ದಿತರಿದ್ದರು.