ಮುಂಬಯಿ, ಜೂ.14: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ದಿ.ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 40ನೇ ವಾರ್ಷಿಕ ಮಹಾಸಭೆ ಇದೇ ಜೂ.18ನೇ ಶನಿವಾರ ಸಂಜೆ 4:00 ಗಂಟೆಗೆ ಬ್ರಿಜ್ವಾಸಿ ಪ್ಯಾಲೇಸ್ ಸಭಾಗೃಹ, ಸೋನಾವಣೆ ರಸ್ತೆಂ, ಗೋರೆಗಾಂವ್ ಪೂರ್ವ ಇಲ್ಲಿ ಜರುಗಿಸಲಾಗುವುದು ಎಂದು ಬ್ಯಾಂಕ್ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Mr. Jaya C.Suvarna
Mr. C.R Mulky
Mrs. Rohini J. Salian
ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್'ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯಿಂದ ಸತತ ತೃತೀಯ ಬಾರಿ `ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ' ಪ್ರಾಪ್ತಿಸಿಕೊಂಡ, ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್'ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯಿಂದ 2014-2015ರ ಹಣಕಾಸು ಸಾಲಿನ ವಾರ್ಷಿಕ `ಸರ್ವೋತ್ಕೃಷ್ಟ ಬ್ಯಾಂಕ್ ಪುರಸ್ಕಾರ' ಕ್ಕೆ ಪಾತ್ರವಾದ, ಮುಂಬಯಿ ಜಿಲ್ಲಾ ಮಧ್ಯವರ್ತಿ ಸಹಕರಿ ಬ್ಯಾಂಕ್ (ರಿ.) ಸಂಸ್ಥೆಯಿಂದಲೂ ಮೊತ್ತ ಮೊದಲ ಬಾರಿ `ಮುಂಬಯಿ ಬ್ಯಾಂಕ್ ಸಹಕಾರ್ ಪುರಸ್ಕಾರ್' ಗೌರವವನ್ನು ಮುಡಿಗೇರಿಕಂಡ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದ್ದು, ಹಿಶೆದಾರರಿಗೆ ವಾರ್ಷಿಕ ಲಾಭಂಶ ಪ್ರಕಟಿಸಲಿದ್ದಾರೆ. ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರುಗಳು ಉಪಸ್ಥಿತರಿದ್ದು ಸಿ.ಆರ್ ಮೂಲ್ಕಿ ಅವರು ಬ್ಯಾಂಕ್ನ ಕಾರ್ಯಸಾಧನೆ, ಗತ ಸಾಲಿನ ವಾರ್ಷಿಕ ಲೆಕ್ಕಚಾರ ವರದಿ ಸಭೆಗೆ ತಿಳಿಸಲಿದ್ದಾರೆ ಎಂದು ಬ್ಯಾಂಕ್ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ಕುಮಾರ್ ಆರ್.ಅವಿೂನ್ ತಿಳಿಸಿದ್ದಾರೆ.
ಸಭೆಯಲ್ಲಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಅನಿಲ್ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಉನ್ನತಾಧಿಕಾರಿಗಳು ಹಾಜರಿದ್ದು ಬ್ಯಾಂಕ್ನ ಕ್ಯಾಲೆಂಡರ್ ವರ್ಷದ ಮಾಹಿತಿ ನೀಡಲಿದ್ದಾರೆ. ಆ ಪ್ರಯುಕ್ತ ಬ್ಯಾಂಕ್ನ ಸದಸ್ಯರು, ಷೇರುದಾರರು ಸಕಾಲದಲ್ಲಿ ಹಾಜರಿದ್ದು ಮಹಾಸಭೆಯ ಸಫಲತೆಗೆ ಸಹಕರಿಸುವಂತೆ ಬ್ಯಾಂಕ್ನ ಉಪ ಪ್ರಧಾನ ಪ್ರಬಂಧÀಕರೂ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ತಿಳಿಸಿದ್ದಾರೆ.