ಮುಂಬಯಿ, ಜೂ.15: ಬೃಹನ್ಮುಂಬಯಿ ಮಹಾ ನಗರ ಪಾಲಿಕೆಯಲ್ಲಿ ಸುಮಾರು 31 ವರ್ಷಗಳ ಕಾಲ ಕನ್ನಡ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತ ಜೀವನ ಸಾಗಿಸುತ್ತಿದ್ದ ಶಿಕ್ಷಕಿ ಸುಶೀಲಾ ವರ್ಧಮಾನ ಜೈನ್ (61.) ಅಲ್ಪಕಾದ ಅಸೌಖ್ಯದಿಂದ ಕಾರ್ಕಳ ಬಜೆಗೋಳಿ ಅಲ್ಲಿನ ತಮ್ಮ ಸ್ವಗೃಹದಲ್ಲಿ ಇತ್ತೀಚೆಗೆ (05.06.2016) ನಿಧನರಾದರು.
ಮುಂಬಯಿ ಉಪನಗರದಲ್ಲಿನ ಗೋರೆಗಾಂ, ಜೋಗೇಶ್ವರಿ ಸೇರಿದಂತೆ ವಿವಿಧ ಮನಪಾ ಕನ್ನಡ ಶಾಲೆಗಳಲ್ಲಿ ಸೇವೆ ಸಲ್ಲಿಸಿ ವಿದ್ಯಾಥಿರ್ü ಹಾಗೂ ಅವರ ಪಾಲಕರ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಜನಾನುರೆಣಿಸಿದ್ದರು. ಅಖಿಲ ಕರ್ನಾಟಕ ಜೈನ್ ಸಂಘ ಮುಂಬಯಿ ಇದರ ಕಾರ್ಯಕಾರಿ ಸಮಿತಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸೇವಾ ನಿರತರಾಗಿದ್ದರು.
ಮೃತರು ಪತಿ ವರ್ಧಮಾನ ಜೈನ್, ಇಬ್ಬರು ಸುಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುಶೀಲಾ ಜೈನ್ ನಿಧನಕ್ಕೆ ಅಖಿಲ ಕರ್ನಾಟಕ ಜೈನ್ ಸಂಘ ಮುಂಬಯಿ ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸದಸ್ಯರು ಸಂತಾಪ ವ್ಯಕ್ತ ಪಡಿಸಿ ಚಿರಶಾಂತಿ ಕೋರಿದ್ದಾರೆ.