ಮುಂಬಯಿ, ಜೂ.16: ಭಾರತ ರಾಷ್ಟ್ರದ ಸಹಕಾರಿ ರಂಗದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾಗಿ ಪುರಸ್ಕಾರ ಪಡೆದ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ ಗುಜರಾತ್ ರಾಜ್ಯದಲ್ಲಿನÀ 4ನೇ ಶಾಖೆಯನ್ನಾಗಿಸಿ ಬ್ಯಾಂಕ್ನ 92ನೇ ಶಾಖೆಯನ್ನು ಇದೇ ಜೂ.20ರ ಸೋಮವಾರ ಬೆಳಿಗ್ಗೆ ಗುಜರಾತ್ ರಾಜ್ಯದ ಕೇಂದ್ರ ಪ್ರದೇಶ ಅಹ್ಮದಾಬಾದ್ ನಗರದ ವಸ್ತ್ರಪುರ್ ಅಲ್ಲಿನ ಜಡ್ಜಸ್ ಬಂಗಲೋ ರಸ್ತೆಯಲ್ಲಿನ ಮನ್ಸಿ ಸರ್ಕಲ್ ಸನಿಹದ ಅಭಿಶ್ರೀ ಅದ್ರಿಓಟ್ ಕಟ್ಟಡದ ನೆಲಮಹಡಿಯಲ್ಲಿ ಶುಭಾರಂಭ ಗೊಳಿಸಲಿದೆ ಎಂದು ಬ್ಯಾಂಕ್ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ತಿಳಿಸಿದ್ದಾರೆ.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ನೂತನ ಶಾಖೆಯನ್ನು ಸೇವಾರ್ಪಣೆ ಮಾಡಲಿದ್ದು, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ಬ್ಯಾಂಕ್ನ ವಿವಿಧ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಆ ಪ್ರಯುಕ್ತ ಮುಂಜಾನೆಯಿಂದ ವಾಸ್ತುಪೂಜೆ, ವಾಸ್ತು ಬಲಿ, ವಾಸ್ತುಹೋಮ, ಗಣಹೋಮ, ಲಕ್ಷ್ಮೀಸತ್ಯನಾರಾಯಣ ಪೂಜೆ, ದ್ವಾರಪ್ರವೇಶ ಪೂಜೆ ಇತ್ಯಾದಿ ಪೂಜಾಧಿಗಳನ್ನು ನೆರವೇರಿಸಲಾಗುವುದು.
ಬ್ಯಾಂಕ್ನ ಸರ್ವ ಗ್ರಾಹಕರು, ಶೇರುದಾರರು, ನೂತನ ಗ್ರಾಹಕರು ಮತ್ತು ಹಿತೈಷಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ನೂತನ ಶಾಖೆಯ ಸರ್ವೋನ್ನತಿಗೆ ಶುಭ ಹಾರೈಸುವಂತೆ ಬ್ಯಾಂಕ್ನ ಡಿಜಿಎಂ ಹಾಗೂ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಮತ್ತು ಶಾಖೆಯ ಮುಖ್ಯಸ್ಥ ಹರೀಶ್ ವಿ.ಪೂಜಾರಿ ಈ ಮೂಲಕ ತಿಳಿಸಿದ್ದಾರೆ.