Tuesday 16th, April 2024
canara news

ವಿವಿಧ ಪ್ರಕರಣಗಳ ೬ ಆರೋಪಿಗಳ ಬಂಧನ

Published On : 23 Jun 2016   |  Reported By : Canaranews Network


ಮಂಗಳೂರು: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ೬ ಮಂದಿ ಕುಖ್ಯಾತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದು, ೨೦ ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.ಕುಡ್ತಮುಗೇರು ಮೂಲದ ಮಂಜೇಶ್ವರ ಬಾಕ್ರಬೈಲು ನಿವಾಸಿ ಬಾರಿಕ್(೩೨), ಕೊಡುಂಗಾಯಿ ರಾಧುಕಟ್ಟೆ ನಿವಾಸಿ ಬಶ್ರೀರ್ ಯಾನೆ ರಾಧುಕಟ್ಟೆ ಬಶೀರ್(೨೫), ಕಡಂಬು ಕ್ವಾಟ್ರಸ್ ನಿವಾಸಿ ಅಶ್ರಫ್ ಯಾನೆ ಅಸ್ರು(೧೯) ರಾದುಕಟ್ಟೆ ನಿವಾಸಿ ಸೈಪುದ್ದೀನ್ ಯಾನೆ ಸೈಪು(೧೯), ಇರಾ ಬಾಳೆಪುಣಿ ನಿವಾಸಿ ಬಾಜೀರ್(೨೬), ಕುಡ್ತಮುಗೇರು ಕರೈ ನಿವಾಸಿ ಜುಬೈರ್ ಕೆ(೨೩) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ ೨ ಕಾರು, ೧ ಪಿಕಪ್ ವಾಹನ, ೧ ಆಟೋ ರಿಕ್ಷಾ, ೧ ದನ, ೧೫ ಕ್ವಿಂಟಾಲ್ ಅಡಿಕೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ರಾಧುಕಟ್ಟೆ ಬಶೀರ್ ಮೇಲೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ೧೯ ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದೆ. ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ಮುಂದುವರಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here