ಮಂಗಳೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಬದ್ಧತೆ ಇದೆ. ಬಡವರಿಗಾಗಿ ಹಲ ವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸಿದ್ದಾರೆ. ಅಂತಹ ಬದ್ಧತೆಯ ವ್ಯಕ್ತಿ ಬೇರೆ ಯಾರಿದ್ದಾರೆ? ಆದ್ದರಿಂದ ಅವರೇ ಮುಂದಿನ 10- 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದು ವರಿಯ ಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ವಿ.ಎಸ್. ಉಗ್ರಪ್ಪ ಅವರು ಪ್ರಾಮಾಣಿಕ ಹಾಗೂ ಬದ್ಧತೆ ಇರುವ ನಾಯಕರು. ಅವರು ಸರಕಾರಕ್ಕೆ ಶಕ್ತಿ ತುಂಬ ಬಲ್ಲರು. ದಕ್ಷ ಮತ್ತು ಪ್ರಾಮಾಣಿಕರಿಗೆ ಮುಖ್ಯಮಂತ್ರಿಗಳು ಶಕ್ತಿ ಕೊಡಬೇಕು. ಹಾಗೆಂದು ನಾನು ಈ ಹಿಂದೆಯೂ ಸಲಹೆ ನೀಡಿದ್ದೇನೆ. ಮುಖ್ಯಮಂತ್ರಿಯವರಿಗೆ ಇದು ಅರ್ಥವಾಗದಿದ್ದರೆ ಎಲ್ಲ ಆಗುಹೋಗುಗಳಿಗೂ ಅವರೇ ಜವಾಬ್ದಾರರು ಎಂದು ಜನಾರ್ದನ ಪೂಜಾರಿ ಅವರು ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.