ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ, ಮುಡಾ (ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ಆಯುಕ್ತ ಮಹಮ್ಮದ್ ನಜೀರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.ಮುಡಾದಲ್ಲೂ ಪ್ರಭಾರ ಆಯುಕ್ತರಾಗಿ ನಜೀರ್ ಅವರೇ ಕರ್ತವ್ಯ ನಿರ್ವಹಿಸಧಿಲಿದ್ದು , ಒಂದೆರಡು ದಿನದಲ್ಲಿ ಮುಡಾಕ್ಕೂ ನೂತನ ಆಯುಕ್ತರ ನೇಮಕ ನಡೆಯಲಿದೆ. ನಿರ್ಗಮಿತ ಆಯುಕ್ತ ಡಾ| ಎಚ್.ಎನ್. ಗೋಪಾಲಕೃಷ್ಣ ಅವರು ರಾಜ್ಯ ನಗರಾಭಿವೃದ್ಧಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ವರ್ಗಾವಣೆಯಾಗಿದ್ದಾರೆ.ಬಿಇ (ಸಿವಿಲ್) ಪದವೀಧರರಾಗಿರುವ ನಜೀರ್ ಕೆಪಿಎಸ್ಸಿ ಮೂಲಕ ಸಾಂಖೀÂಕ ಇಲಾಖೆಗೆ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಯೋಜನಾಧಿಕಾರಿಯಾಗಿದ್ದ ಅವರು ಬಳಿಕ ಮುಡಾ ಆಯುಕ್ತರಾಗಿದ್ದರು. ಅಧಿಕಾರ ಹಸ್ತಾಂತರ ಸಮಯದಲ್ಲಿ ಮನಪಾ ಮೇಯರ್ ಎಂ. ಹರಿನಾಥ್, ಉಪಮೇಯರ್ ಸುಮಿತ್ರಾ ಕರಿಯ, ಮುಖ್ಯಸಚೇತಕ ಎಂ. ಶಶಿಧರ ಹೆಗ್ಡೆ, ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಮೊದಲಾದವರು ಉಪಸ್ಥಿತರಿದ್ದರು.