ಮಂಗಳೂರು: ತಲವಾರು, ಮಾರಕಾಸ್ತ್ರಗಳಿಂದ ಹಾಡುಹಗಲೇ ಯುವಕನೋರ್ವನ ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ಯುವಕನನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಡಹಗಲೇ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯೊಬ್ಬನ ತಂದೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಳೇಕಲ ನಿವಾಸಿ ನಾಸೀರ್ಅವರ ಪುತ್ರ ಮಹಮ್ಮದ್ ಖಮಾಲುದ್ದೀನ್ (25)ತಲವಾರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದವರು. ಮಾಸ್ತಿಕಟ್ಟೆಯ ಬೀಫ್ ಸ್ಟಾಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳಾದ ಉಳ್ಳಾಲ ನಿವಾಸಿಗಳಾದ ಅರ್ಫಾನ್, ನಿಸಾರ್ ಹಾಗೂ ಜಾಫರ್ ಎಂಬವರೇ ಕೊಲೆಗೆ ಯತ್ನಿಸಿದವರಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ಈ ತಂಡ ಖಮಾಲುದ್ಧೀನ್ ಮೇಲೆ ಕೊಲೆ ಯತ್ನ ನಡೆಯುತ್ತಿರುವುದು.
ಘಟನೆ ವಿವರ :
ಅಳೇಕಲ ನಿವಾಸಿ ಖಮಾಲುದ್ಧೀನ್ ಮಧ್ಯಾಹ್ನದ ವೇಳೆಗೆ ಅಂಗಡಿಯಲ್ಲಿ ಕುಳಿತ್ತಿದ್ದಾಗ ತಲವಾರು, ಮತ್ತು ಮಾರಕಾಸ್ತÅಗಳಿಂದ ಬಂದ ಮೂವರು ಯದ್ವಾತದ್ವಾ ಹೊಡೆದು ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ತೊಕ್ಕೊಟ್ಟಿನ ಆಸ್ಪತ್ರೆಗೆ ದಾಖಲಿಸಿದರು. ತಿಂಗಳ ಹಿಂದೆಯೂ ರಂಝಾನ್ ಉಪವಾಸದ ಸಂದರ್ಭ ಅರ್ಫಾನ್, ನಿಸಾರ್, ಜಾಫರ್ ಸೇರಿದಂತೆ ಮುಖಾ¤ರ್ ಎಂಬವರ ತಂಡ ಇದೇ ಮಾಸ್ತಿಕಟ್ಟೆಯ ಬೀಫ್ ಸ್ಟಾಲಿಗೆ ನುಗ್ಗಿ ಖಮಾಲುದ್ದೀನ್ ಅವರಿಗೆ ಹಲ್ಲೆ ನಡೆಸಿ ರೂ.12,000 ಹಣ ದರೋಡೆಗೈದಿದ್ದರು.
ಈ ಬಗ್ಗೆ ಖಮಾಲುದ್ದೀನ್ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಮುಖಾ¤ರ್ ಎಂಬಾತನನ್ನು ಬಂಧಿಸಿದ್ದರು. ಇದರಿಂದ ಕೆರಳಿದ ತಂಡ ನಿರಂತರವಾಗಿ ಖಮಾಲುದ್ದೀನ್ ಗೆ ದೂರು ಹಿಂಪಡೆಯುವಂತೆ ಬೆದರಿಕೆ ಹಾಕುತಿತ್ತು. ಅಲ್ಲದೆ ಆರೋಪಿಗಳ ಪೈಕಿ ಅರ್ಫಾನ್ ತಂದೆ ಜಲ್ದೀ ಸಿದ್ಧೀಕ್ ಕಮಾಲುದ್ಧೀನ್ ತಂದೆಗೆ ಕರೆ ಮಾಡಿ ಬೆದರಿಸಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ಖಮಾಲುದ್ದೀನ್ ಮೌಖೀಕವಾಗಿ ದೂರು ನೀಡಿದ್ದರು. ಬುಧವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಅರ್ಫಾನ್ನ ತಂದೆಯಾದ ಜಲ್ದಿ ಸಿದ್ಧಿಕ್ನನ್ನು ತೊಕ್ಕೊಟ್ಟಿನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.