ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ಸಾರ್ವಜನಿಕರ ಮೊರೆ ಹೋಗಿದ್ದಾರೆ.
ಪಾಂಡೇಶ್ವರ ಸಮೀಪದ ಮಂಕಿಸ್ಟ್ಯಾಂಡ್ ನ ಶಾಂತಾ ಆಳ್ವ ಮಿಷನ್ ಕಂಪೌಂಡ್ನ ವಿಜಯ್ ಯಾನೆ ಮಂಕಿಸ್ಟ್ಯಾಂಡ್ಡ್ ವಿಜಯ್ (30) ಮತ್ತು ಸಂಪತ್ ಬಂಗೇರಾ (20), ಗೋರಿಗುಡ್ಡೆ ಪರ್ಪಲ್ ಸ್ಟ್ರೀಟ್ಟ್ ಲೇನ್ನ ಮೆಲಕ್ (19), ಅಶೋಕನಗರದ 6 ಬಿ ಕ್ರಾಸ್ನ ಪ್ರವೀಣ ಯಾನೆ ಚೋಟು (23) ಅವರು ಕಾಣೆಯಾಗಿರುವ ಆರೋಪಿಗಳು. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಐಪಿಸಿ 402, 399, 143, 147, 148, 149, 307, 324, 341, 504, 506 ಕಲಂ ಅಡಿಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.