ಮಂಗಳೂರು: ಮೊಬೈಲ್ ರೀಚಾರ್ಜ್ ಮಾಡಲು ಬರುವ ಯುವತಿಯರ ನಂಬರ್ ಪಡೆದು ಅವರಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿ ಹಾಗೂ ಕರೆಗಳನ್ನು ಮಾಡಿ ವಂಚಿಸುತ್ತಿದ್ದ ತೊಕ್ಕೊಟ್ಟು ಮೊಬೈಲ್ ಅಂಗಡಿ ಮಾಲೀಕನನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ತೊಕ್ಕೊಟ್ಟು ಸ್ಪೀಡ್ ಮೊಬೈಲ್ ಸೆಂಟರಿನ ಮಾಲೀಕ ಉಳ್ಳಾಲ ಕೋಟೆಪುರ ನಿವಾಸಿ ಇಮ್ರಾನ್ (35) ಎಂದು ಗುರುತಿಸಲಾಗಿದೆ.ಕೆಲವು ಸಮಯಗಳಿಂದ ತೊಕ್ಕೊಟ್ಟಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಈತ ತನ್ನ ಬಳಿ ರೀಚಾರ್ಜ್ಗೆಂಿದು ಬರುವ ಯುವತಿಯರ ಮೊಬೈಲ್ ನಂಬರ್ಗ್ಳನ್ನು ಪಡೆದು ಪ್ರೀತಿ ಪ್ರೇಮದ ಹೆಸರಿನಲ್ಲಿ ವಂಚಿಸುತ್ತಿದ್ದನು.
ಈ ಸಂಬಂಧ ಈಗಾಗಲೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 200 ಕ್ಕೂ ಹೆಚ್ಚು ಯುವತಿಯರು ಮೌಖಿಕ ದೂರಷ್ಟೇ ನೀಡಿದ್ದರು. ಹೀಗಾಗಿ ದೂರಿನನ್ವಯ ಈ ಹಿಂದೆ ಉಳ್ಳಾಲ ಪೊಲೀಸರು ಈತನ ಅಂಗಡಿಗೆ ದಾಳಿ ನಡೆಸಿದ್ದರೂ ಯಾವುದೇ ದಾಖಲೆಗಳು ಲಭ್ಯವಾಗಿರಲಿಲ್ಲ.ಇಮ್ರಾನ್ ಮೇಲೆ 50ಕ್ಕೂ ಹೆಚ್ಚು ದೂರುಗಳು ಉಳ್ಳಾಲ ಪೊಲೀಸರಿಗೆ ಬಂದಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.