ಕಾಸರಗೋಡು, ಆ.03: ಜಿಲ್ಲೆಯನ್ನು ದಕ್ಷಿಣ ತುಳುನಾಡೆಂದೂ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಧ್ಯ ತುಳುನಾಡೆಂದೂ, ಉಡುಪಿ ಜಿಲ್ಲೆಯನ್ನು ಉತ್ತರ ತುಳುನಾಡೆಂದೂ ಮರುನಾಮಕರಣಗೊಳ್ಳಲಿ ಎಂದು, ತುಳುನಾಡಿಗೆ ಸಂಪರ್ಕಿಸುವ ಒಂದು ರೈಲುಗಾಡಿಗೆ ತುಳುನಾಡು ಎಕ್ಸ್ಪ್ರೆಸ್ ಎಂದು ಹೆಸರಿಸ ಬೇಕೆಂದೂ ಈ ನಿಟ್ಟಿನಲ್ಲಿ ತುಳುನಾಡಿನವರು ಪ್ರಯತ್ನಿಸಬೇಕು ಎಂದು ವಿಶ್ವನಾಥ ರೈ ಮಾಯಿಪ್ಪಾಡಿ ಅಭಿಪ್ರಾಯ ಪಟ್ಟರು.
ಬದಿಯಡ್ಕದಲ್ಲಿ ಡಿ.9ರಿಂದ 13ರ ವರೆಗೆ ನಡೆಯಲಿರುವ ವಿಶ್ವ ತುಳುವೆರೆ ಆಯನದ ಮಧೂರು ಪಂಚಾಯತು ಸಮಿತಿ ರೂಪೀಕರಣ ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಂ.ವೆಂಕಟಕೃಷ್ಣ ಮಧೂರು ತುಳುನಾಡಿನ ಸಂಸ್ಕøತಿ ಮತ್ತು ಆಚಾರ ವಿಚಾರಗಳು ಜಗತ್ತಿಗೇ ಮಾದರಿ. ಅದನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡುವಲ್ಲಿ ವಿಶ್ವ ತುಳುವೆರೆ ಆಯನೊ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬಿ.ಬಾಲಕೃಷ್ಣ ಅಗ್ಗಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೆÇ್ರ| ಶ್ರೀನಾಥ್ ಕಾಸರಗೋಡು, ಡಾ| ರಾಜೇಶ್ ಆಳ್ವ ಬದಿಯಡ್ಕ ವಿಶ್ವ ತುಳುವೆರೆ ಆಯನದ ಬಗ್ಗೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಧೂರು ಪಂಚಾಯತು ಸಮಿತಿ ರಚಿಸಲಾಯಿತು. ಸೀತಾರಾಮ ಮಾಸ್ತರ್, ಸುಕುಮಾರ ಕುದ್ರೆಪ್ಪಾಡಿ, ರವೀಂದ್ರ ರೈ, ಶ್ರೀಮತಿ ಶೋಭನ, ಮುರಳಿನಾಥ್ ಪರಕಿಲ, ಶ್ರೀಮತಿ ಸರಸ್ವತಿ, ಶಿವ ಕೂಡ್ಲು, ಮೊದಲಾದವರು ಉಪಸ್ಥಿತರಿದ್ದರು.
ವೇಣುಗೋಪಾಲ ಕಲ್ಲೂರಾಯ ಪ್ರಾರ್ಥನೆ ಹಾಡಿದರು. ತಾರನಾಥ ಮಧೂರು ಸ್ವಾಗತಿಸಿ ಉಮೇಶ್ ಗಟ್ಟಿ ವಂದಿಸಿದರು. ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.