ಮಂಗಳೂರು: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬ ರವಿವಾರ ಕರಾವಳಿಯಾದ್ಯಂತ ಸಂಭ್ರಮದಿಂದ ನಡೆಯಿತು. ಭಕ್ತರು ವಿವಿಧ ನಾಗಾಲಯಗಳು,ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ತನು ಅರ್ಪಿಸಿದ್ದಾರೆ. ತಮ್ಮ ಹಿರಿಯರು ನಂಬಿಕೊಂಡು ಬಂದ ಮೂಲ ನಾಗನಬನಗಳಿಗೆ ಹೋಗಿ ಪೂಜೆ ಸಲ್ಲಿಸಿ ಪುನೀತರಾಗಿದ್ದಾರೆ.
ಭಕ್ತರು ಮಾರುಕಟ್ಟೆಯಲ್ಲಿ ಸಿಗುವ ಹೂವು, ಬಾಳೆ ಹಣ್ಣು, ಎಳನೀರು, ಕೇದಗೆ ಹೂವುಗಳನ್ನು ಖರೀದಿಸಿ ನಾಗ ದೇವರಿಗೆ ಸಮರ್ಪಣೆ ಮಾಡಿದರು. ಈ ಬಾರಿ ನಾಗರಪಂಚಮಿ ರವಿವಾರ ಬಂದಿರುವುದರಿಂದ ಹೆಚ್ಚಿನ ಕಡೆ ಜನಸಂದಣಿ ಹೆಚ್ಚಾಗಿತ್ತು.