ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶೋಭಾ ಸುರೇಶ್ ಭಂಡಾರಿ ಆಯ್ಕೆ
ಮುಂಬಯಿ, ಆ.09: ಕಳೆದ ರವಿವಾರ ಸಯಾನ್ ಪಶ್ಚಿಮದಲ್ಲಿನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ನಡೆದ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ 63ನೇ ವಾರ್ಷಿಕ ಮಹಾಸಭೆಯಲ್ಲಿ 2016-2018ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ನ್ಯಾಯವಾದಿ ಶೇಖರ ಎಸ್.ಭಂಡಾರಿ ಭಾಂಡೂಪ್ ಅವರನ್ನೇ ಸಭೆಯು ಪುನಾರಾಯ್ಕೆ ಗೊಳಿಸಿದರೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶೋಭಾ ಸುರೇಶ್ ಭಂಡಾರಿ ಕಡಂದಲೆ ಅವರನ್ನು ಸರ್ವಾನುಮತದಿಂದ ಆಯ್ಕೆ ಗೊಳಿಸಲಾಯಿತು.
Adv. Shekhar S. Bhandary Vijay R.Bhandary
Karunakar B.Bhandary Shobha S.Bhandary
ನ್ಯಾ| ರಾಮಣ್ಣ ಎಂ.ಭಂಡಾರಿ ಮತ್ತು ಪ್ರಭಾಕರ್ ಪಿ.ಭಂಡಾರಿ ಥಾಣೆ (ಉಪಾಧ್ಯಕ್ಷರು), ವಿಜಯ ಆರ್. ಭಂಡಾರಿ, (ಗೌ| ಪ್ರ| ಕಾರ್ಯದರ್ಶಿ), ಕರುಣಾಕರ ಜಿ.ಭಂಡಾರಿ, (ಗೌ| ಕೋಶಾಧಿಕಾರಿ), ಶಶಿಧರ್ ಡಿ.ಭಂಡಾರಿ ಮತ್ತು ಪುರುಷೋತ್ತಮ ಜಿ.ಭಂಡಾರಿ (ಜೊತೆ ಕಾರ್ಯದರ್ಶಿಗಳು), ಪ್ರಕಾಶ್ ಭಂಡಾರಿ (ಜೊತೆ ಕೋಶಾಧಿಕಾರಿ), ನ್ಯಾ| ಸುಂದರ್ ಜಿ.ಭಂಡಾರಿ (ಸಲಹಾ ಸಮಿತಿ ಕಾರ್ಯಾಧ್ಯಕ್ಷ), ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಾಲಕೃಷ್ಣ ಪುತ್ತೂರು (ಪುಣೆ), ಉದಯ ಭಂಡಾರಿ ಶಹಾಪುರ, ಕೇಶವ ಭಂಡಾರಿ, ಸೌರಭ್ ಎಸ್.ಭಂಡಾರಿ, ರುಕ್ಮಯ ಭಂಡಾರಿ, ನಾರಾಯಣ ಭಂಡಾರಿ, ಪದ್ಮನಾಭ ಭಂಡಾರಿ, ರಾಕೇಶ್ ಭಂಡಾರಿ, ಜಯಶೀಲ ಭಂಡಾರಿ, ರಮೇಶ್ ಭಂಡಾರಿ, ವಿಶ್ವನಾಥ ಭಂಡಾರಿ, ಕರುಣಾಕರ ಭಂಡಾರಿ, ಜಯ ಭಂಡಾರಿ, ನವೀನ್ ಭಂಡಾರಿ, ಪ್ರಶಾಂತ್ ಭಂಡಾರಿ ಪುಣೆ, ಮಹಿಳಾ ವಿಭಾಗಕ್ಕೆ ಪಲ್ಲವಿ ರಂಜಿತ್ ಭಂಡಾರಿ ಮತ್ತು ಅನುಶ್ರೀ ಶಿವರಾಮ ಭಂಡಾರಿ (ಉಪ ಕಾರ್ಯಾಧ್ಯಕ್ಷೆಯರು), ರೇಖಾ ಎ.ಭಂಡಾರಿ (ಕಾರ್ಯದರ್ಶಿ), ಕು| ಕ್ಷಮಾ ಆರ್.ಭಂಡಾರಿ (ಕೋಶಾಧಿಕಾರಿ), ಸರಿತಾ ಬಂಗೇರ (ಜೊತೆ ಕಾರ್ಯದರ್ಶಿ), ಲಲಿತಾ ವಿ.ಭಂಡಾರಿ, ಶಾಲಿನಿ ರಮೇಶ್ ಭಂಡಾರಿ ಸಮಿತಿ ಸದಸ್ಯರುಗಳು ಆಯ್ಕೆ ಯಾಗಿರುವರು.