ಕುಂದಾಪುರ ಪೇಟೆ ವೆಂಕಟರಮಣ ದೇವಸ್ಥಾನದ ಮೊಕ್ತೇಸರರೂ, ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಯ ಖಜಾಂಚಿಯೂ ಆಗಿದ್ದ, ಹಿರಿಯ ಕೃಷಿಕೋದ್ಯಮಿ ಕೋಡಿ ಶ್ರೀನಿವಾಸ ಶೆಣೈ(76) ತಾ 10 ರಂದು ನಿಧನರಾದರು.
ಕುಂದಾಪುರದಲ್ಲಿ ಹಲವು ದಶಕಗಳಿಂದ ಧಾರ್ಮಿಕ, ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಶೆಣೈಯವರು ಸರಳ, ಸಜ್ಜನ, ವ್ಯಕ್ತಿಯಾಗಿದ್ದು ಕೃಷಿಕರಾಗಿಯೂ ಕೋಡಿಯಲ್ಲಿ ವ್ಯವಸಾಯ ನಡೆಸಿದ ಅನುಭವ ಹೊಂದಿದವರು.
ಇವರ ನಿಧನಕ್ಕೆ ಶ್ರೀ ವೆಂಕಟರಮಣ ದೇವ ಎಜ್ಯುಕೇಶನಲ್ ಟ್ರಸ್ಟ್ ದುಃಖ ವ್ಯಕ್ತಪಡಿಸಿ ಶಾಲೆ, ಕಾಲೇಜಿಗೆ ರಜೆ ನೀಡಿತು.
ಶ್ರೀ ವೆಂಕಟರಮಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಮೋಹನ್ ಕಾಮತ್ , ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ರಾಧಾಕೃಷ್ಣ ಶೆಣೈ ಸಹಿತ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದರು.
ಮೃತರು ಪತ್ನಿ , ಓರ್ವಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.